ಯಾಕೂಬ್

Update: 2017-08-03 15:07 GMT

ಉಪ್ಪಿನಂಗಡಿ,ಆ.2: ಕೊಯ್ಲ ಗ್ರಾಮದ ಬಡ್ಡಮೆ ನಿವಾಸಿ, ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಅಧ್ಯಕ್ಷ ಪಿ. ಯಾಕೂಬ್ (63 ವ.) ಕೆಲ ದಿನಗಳ ಅನಾರೋಗ್ಯದಿಂದ ಆ. 3ರಂದು ತನ್ನ ಮನೆಯಲ್ಲಿ ನಿಧನ ಹೊಂದಿದರು.

ಯಾಕೂಬ್‍ರವರು ಕೊಯ್ಲ ದಲ್ಲಿ ಕಳೆದ 40 ವರ್ಷಗಳಿಂದ ಅಂಗಡಿ ಹೊಂದಿದ್ದು, ಮತ್ತು ಬೀಡಿ ಗುತ್ತಿಗೆದಾರರಾಗಿರುತ್ತಾರೆ. ಕೊಯ್ಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿದ್ದು, ಸ್ಥಳೀಯ ಇತರೇ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು, ಕೊಡುಗೈದಾನಿಯಾಗಿ ಚಿರಪರಿಚಿತರಾಗಿದ್ದರು.

 ಮೃತರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ವರ್ತಕರು, ವಿವಿಧ ರಾಜಕೀಯ ಪಕ್ಷದ ಮುಖಂಡರು, ಧಾರ್ಮಿಕ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮೃತರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

 ಮೃತರು ಪತ್ನಿ ಬೀಫಾತುಮ್ಮ, ಪುತ್ರಿಯರಾದ ಜುಮ್ಮಾಬಿ, ನೆಬಿಸ, ಆಯಿಶಾ, ಸಕೀನ, ಫಾಯಿಝ ಪುತ್ರರಾದ ಹಂಝ, ಅಬ್ದುಲ್ ಗಫಾರ್, ಅರಫ, ತಾಜುದ್ದೀನ್‍ರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ