ಟಿಪ್ಪು ಸುಲ್ತಾನನ ರಾಜನೀತಿ

Update: 2017-08-05 18:17 GMT

‘‘ಟಿಪ್ಪು ಸುಲ್ತಾನನೆಂಬ ರಾಜನೊಬ್ಬನಿದ್ದ’’

ದಯವಿಟ್ಟು, ಉನ್ಮತ್ತ ಪ್ರಬಲ ಶಕ್ತಿಯೊಂದು

ಸೋತು ಹೋಗಿರುವ ಘಳಿಗೆಗಳು

ಕ್ಷಣಕಾಲ ನಮ್ಮನ್ನು ಅಧೀರಗೊಳಿಸಬಹುದು.

ಇಂತಹ ಸಂದರ್ಭದಲ್ಲಿ ಮನುಷ್ಯನಲ್ಲಿ ವಿಶ್ವಾಸ

ಕಳೆದುಕೊಳ್ಳುವ ಘೋರ ತಪ್ಪನ್ನೆಸಗದಿರಿ.

ಈ ರಾಷ್ಟ್ರ ಕಳೆದುಹೋದ

ತನ್ನ ಹೆಮ್ಮೆ ಮತ್ತು ಪರಂಪರೆಯನ್ನು

ಪಡೆಯಲಿದೆ. ನಿಮ್ಮ ಮತ್ತು

ನನ್ನ ಜೀವಿತಾವಧಿಯಲ್ಲಿ ಇದು ಸಂಭವಿಸದೇ

ಹೋಗಬಹುದು.

ಆದರೆ ಆ ದಿನ ಒಂದೇ ಬರುತ್ತದೆ.

ಇಡೀ ಜಗತ್ತು ಸಂಭ್ರಮದಿಂದ ಹೇಳಿಕೊಳ್ಳುವ ದಿನ.

ಭಾರತದ ಚರಿತ್ರೆಯು ಅವಮಾನದಿಂದ ತುಂಬಿದ್ದ

ದಿನಗಳಲ್ಲಿ, ಯಾರ ಸಹಾಯವೂ ಇಲ್ಲದೆ, ಪ್ರಬಲ

ಆಂಗ್ಲರನ್ನು ಎದುರಿಸಿದ

ಟಿಪ್ಪು ಸುಲ್ತಾನನೆಂಬ ರಾಜನೊಬ್ಬನಿದ್ದ ಎಂದು

ಹೇಳಿಕೊಳ್ಳುವ ದಿನ

ಬರಲಿರುವ ದಿನಮಾನಗಳ ಮೇಲೆ

ಸುಲ್ತಾನನ ಹೆಜ್ಜೆಗುರುತುಗಳು

ಚಿರಸ್ಥಾಯಿಯಾಗಿ ಉಳಿಯಲಿವೆ.

(ಟಿಪ್ಪು ಸೋತ ಘಳಿಗೆಗಳಲ್ಲಿ ದಿವಾನ್ ಪೂರ್ಣಯ್ಯನ ಮಾತುಗಳು)

Similar News