ಆದಿರಾಜ್ ಜೈನಿ

Update: 2017-08-07 12:20 GMT

ಮುಂಬೈ, ಆ. 7: ಅಖಿಲ ಕರ್ನಾಟಕ ಜೈನ ಸಂಘ ಮುಂಬೈ ಇದರ  ಮಾಜಿ ಅಧ್ಯಕ್ಷ ಆದಿರಾಜ್ ಜೈನಿ (96) ಇಂದು ಬೆಳಗ್ಗೆ ಇಲ್ಲಿನ ಕಾಂದಿವಿಲಿ ಪಶ್ಚಿಮದ ಮಹಾವೀರ ನಗರದಲ್ಲಿನ ನಿವಾಸದಲ್ಲಿ  ನಿಧನರಾದರು.

ಮೃತರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕುಪ್ಪೆಪದವು, ಕಿಲ್ಲೆಂಜಾರು ಅರಮನೆ ಶ್ರೀಮಂತ ಜೈನಮನೆತನದವರಾಗಿದ್ದು, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.

ಜೈನ ಸಮುದಾಯದ ಮುಂಬೈಯಲ್ಲಿನ ಹಿರಿಯ ಮುತ್ಸದ್ಧಿಗಳಾಗಿ ಸಂಘದ ಸರ್ವೋಭಿವೃದ್ಧಿಗಾಗಿ ಶ್ರಮಿಸಿ ಅಗಲಿದ ಜೈನಿ ನಿಧನಕ್ಕೆ ಅಖಿಲ ಕರ್ನಾಟಕ ಜೈನ ಸಂಘ ಮುಂಬೈ ಅಧ್ಯಕ್ಷ ಬಿ.ಮುನಿರಾಜ ಅಜಿಲ, ಉದಯ ಅಥಿಕಾರಿ, ಪಿ.ಅನಂತ ರಾಜ, ಮನೀಷ್ ಹೆಗ್ಡೆ, ರಘುವೀರ್ ಹೆಗ್ಡೆ, ಮಹಾವೀರ್ ಜೈನ್ಮತ್ತು ಇತರ ಪದಾಧಿಕಾರಿಗಳು, ಪವನಂಜಯ ಬಲ್ಲಾಳ್, ಸಂಪತ್‌ ಕುಮಾರ್ ಎಸ್.ಜೈನ್, ಲೋಕನಾಥ್ ಜೈನ್, ಭರತ್ ಜೈನ್ ಸೇರಿದಂತೆ ಇತರರು ಸಂತಾಪ ಸೂಚಿಸಿದ್ದಾರೆ.

ಇಂದು ಮಧ್ಯಾಹ್ನ ಕಾಂದಿವಿಲಿ ಪಶ್ಚಿಮದ ಧಾಣುಕರ್‌ವಾಡಿಯ ರುಧ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿದ್ದು, ಅಖಿಲ ಕರ್ನಾಟಕ ಜೈನ ಸಂಘದ ಪದಾಧಿಕಾರಿಗಳು, ಸದಸ್ಯರು, ನಲ್ಲೂರು ಧನಂಜಯ ಅಧಿಕಾರಿ, ಪ್ರದೀಪ್ ಜೈನಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು, ಅಂತಿಮ ನಮನ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ