ಕೆ.ಸಿ.ಎಫ್. ಅಲ್ ಹಸ್ಸ ಸೆಕ್ಟರ್ ವತಿಯಿಂದ ಸ್ವಾತಂತ್ರೋತ್ಸವ

Update: 2017-08-15 07:15 GMT

ಅಲ್ ಹಸ್ಸ, ಆ.15: ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಲ್ ಹಸ್ಸ ಸೆಕ್ಟರ್ (ದಮ್ಮಾಮ್) ವತಿಯಿಂದ ಹಫೂಫ್ ಫುಟ್ಬಾಲ್ ಸ್ಟೇಡಿಯಂ ನಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ ನಡೆಯಿತು.

ಕಾರ್ಯಕ್ರಮವನ್ನು ಉಸ್ತಾದ್ ನೌಶಾದ್ ಅಮಾನಿ ಚಾಲನೆ ನೀಡಿದರು. ಧ್ವಜಾರೋಹಣ ಕಾರ್ಯಕ್ರಮವನ್ನು ಉದ್ಯಮಿ
ಹಾಜಿ ಮುಹಮ್ಮದ್‌ ಶಾಫಿ ಕುದಿರ್  ನೆರವೇರಿಸಿ ಮಾತನಾಡಿದರು.

ಉದ್ಯಮಿ ಅಶ್ರಫ್ ಮಾತನಾಡಿ ಮಹಾತ್ಮ ಗಾಂಧಿ ಕಂಡ ಕನಸಿನ ಭಾರತ ನಿರ್ಮಾಣವಾಗ ಬೇಕಾದರೆ ಯುವ ಶಕ್ತಿ ಒಂದಾಗಬೇಕು. ನಮ್ಮ ಭಾರತ ಯುವ ಶಕ್ತಿಯಿಂದ ತುಂಬಿದ ರಾಷ್ಟ್ರ. ಯುವಕರು ಬಂಡೆ ಕಲ್ಲು ಇದ್ದಂತೆ. ಯುವಕರು ಒಂದಾದರೆ ಜಗತ್ತಿನಲ್ಲಿಯೇ ಪ್ರಥಮ ಸ್ಥಾನ ನಮ್ಮ ದೇಶದ ಪಾಲಿಗೆ ಎಂದು ಅಭಿಪ್ರಾಯ ಪಟ್ಟರು.

ಅಲ್ ಹಸ್ಸ ಸೆಕ್ಟರ್ ಪ್ರ. ಕಾರ್ಯದರ್ಶಿ ಇಸ್ಹಾಕ್ ಫಜೀರ್ ಕೆಸಿಎಫ್ ನ ಸಮಾಜಮುಖಿ ಕಾರ್ಯವನ್ನು  ವಿವರಿಸಿದರು.
ಈ ಸಂದರ್ಭ ಕೆಸಿಎಫ್ ರಾಷ್ಟ್ರೀಯ ನಾಯಕ ಅಶ್ರು ಬಜ್ಪೆ, ನೌಶಾದ್ ಅಮಾನಿ ಉಸ್ತಾದ್, ಅಶ್ರಫ್, ಹಬೀಬ್, ಮುಹಮ್ಮದ್‌ ಶಾಫಿ ಕುದಿರ್, ಕೆಸಿಎಫ್ ಸೆಕ್ಟರ್ ಅಧ್ಯಕ್ಷ ಹಾರೀಸ್ ಕಾಜೂರ್, ಅಬೂಬಕ್ಕರ್ ಕಿಲ್ಲೂರು ಉಪಸ್ಥಿತಿಯಿದ್ದರು. ಹಾರೀಸ್ ಕಾಜೂರ್ ವಂದಿಸಿದರು. 

Writer - ಹಕೀಂ ಬೋಳಾರ್

contributor

Editor - ಹಕೀಂ ಬೋಳಾರ್

contributor

Similar News