ಅಲ್ ಕೋಬಾರ್: ಕೆಸಿಎಫ್ ವತಿಯಿಂದ ಸ್ವಾತಂತ್ರ್ಯೋತ್ಸವ

Update: 2017-08-15 07:28 GMT

ಅಲ್ ಕೋಬಾರ್, ಆ. 15: 'ದ್ವೇಷ ಅಲಿಸಿ ದೇಶ ಉಳಿಸಿ' ಎಂಬ ಸಂದೇಶ ದಡಿಯಲ್ಲಿ ಅಲ್ ಕೋಬಾರ್ ಸೆಕ್ಟರ್ ಕೆಸಿಎಫ್ ಭಾರತ ದೇಶದ ಸ್ವಾತಂತ್ರ್ಯ ದಿನಾಚರಣೆ ಹಮ್ಮಿಕೊಂಡಿತು.

ಸೆಕ್ಟರ್ ಅಧ್ಯಕ್ಷ  ಅಬ್ದುಲ್ ರಝಾಕ್ ಸಖಾಫಿ ದ್ವಜಾರೋಹಣ ನೇರವೇರಿಸಿದರು.

ರಾಷ್ಟ್ರ ಗೀತೆ ಹಾಡಿ ನಂತರ ಪ್ರಾರ್ಥನೆ ಮೂಲಕ ಸಭಾ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಮನ್ಸೂರ್ ಕಾಟಿಪಳ್ಳ ಕಾರ್ಯಕ್ರಮ ಉಧ್ಘಾಟಿಸಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಲೀಲ್ ಕೆ.ಸಿ.ರೋಡ್ ಸ್ವಾಗತಿಸಿದರು. ಸೆಕ್ಟರ್ ಅಧ್ಯಕ್ಷರು ಅಬ್ದುಲ್ ರಝಾಕ್ ಸಖಾಫಿ ಸ್ವಾತಂತ್ರ್ಯ ಸಂದೇಶ ಭಾಷಣ ಮಾಡಿದರು. ಝೈನುಲ್ ಆಬಿದ್ ಝುಹ್ರಿ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಿದರು. ಕೆಸಿಎಫ್ ಝೋನ್ ಸಂಘಟನಾ ವಿಭಾಗ ಚೇರ್ಮಾನ್ ಶಾಫಿ ಮದನಿ ಉಸ್ತಾದ್  ಭಾಷಣ ಮಾಡಿದರು.  ಕಾರ್ಯಕರ್ತರಿಂದ ಕಿರು ಭಾಷಣಗಳು ನಡೆಯಿತು. ಇಬ್ರಾಹೀಂ ವಳವೂರು ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News