ಶಿವಶಂಕರ್ ಗಟ್ಟಿ ಪಿಲಾರು

Update: 2017-08-21 15:06 GMT

ಉಳ್ಳಾಲ, ಆ. 21: ಡಿವೈಎಫ್ ಐ ಉಳ್ಳಾಲ ವಲಯ ಸಕ್ರೀಯ ಕಾರ್ಯಕರ್ತ ಶಿವಶಂಕರ್ ಗಟ್ಟಿ ಪಿಲಾರು (33)  ಅಲ್ಪಕಾಲದ ಅಸೌಖ್ಯದಿಂದ ಪಿಲಾರು ಸ್ವಗೃಹದಲ್ಲಿ  ನಿಧನರಾದರು.

ಡಿವೈ ಎಫ್ ಐ ಪಿಲಾರು ಘಟಕದ ಮಾಜಿ ಅಧ್ಯಕ್ಷ, ಮಾಜಿ ಕಾರ್ಯದರ್ಶಿ ಹಾಗೂ ಉಳ್ಳಾಲ ವಲಯ ಸಮಿತಿ ಜತೆ ಕಾರ್ಯದರ್ಶಿಯಾಗಿ, ಜಿಲ್ಲಾ ಸಮಿತಿ ಮುಖಂಡನಾಗಿ, ಸಿಪಿಎಂ ಪಿಲಾರು ಶಾಖೆ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುವ ಮೂಲಕ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕೃಷ್ಣಪ್ಪ ಸಾಲ್ಯಾನ್, ಡಿ ವೈಎಫ್ ಐ ಜಿಲ್ಲಾಧ್ಯಕ್ಷ ಹಾಗೂ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಂತೊಷ್ ಬಜಾಲ್, ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಜಯಂತ ನಾಯ್ಕಿ, ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ಕೋಟೆಕಾರು ರೈತ ಸಂಘದ ಅಧ್ಯಕ್ಷ ಸಂಜೀವ ಪಿಲಾರ್  ಮುಂತಾದವರು ಮೃತರ ಅಂತಿಮ ದರ್ಶನ ಪಡೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ