ಕೆಂಪಿ ಇಸ್ಮಾಯಿಲ್ ಮೋನು

Update: 2017-08-22 08:02 GMT

ಉಪ್ಪಿನಂಗಡಿ, ಆ. 22: ಇಲ್ಲಿನ ಕೆಂಪಿಮಜಲು ನಿವಾಸಿ, ಉದ್ಯಮಿ ಕೆಂಪಿ ಇಸ್ಮಾಯಿಲ್ ಮೋನು ಕೆಲ ದಿನಗಳ ಅನಾರೋಗ್ಯದಿಂದ  ತನ್ನ ಮನೆಯಲ್ಲಿ ನಿಧನರಾದರು.

ಇಸ್ಮಾಯಿಲ್ ಮೋನು ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿಯಲ್ಲಿ ಸಾಗರ್ ಸ್ವೀಟ್ಸ್ ಅಂಗಡಿ ಹೊಂದಿದ್ದು,  ಕಳೆದ 2 ವರ್ಷಗಳಿಂದ ಅಡಿಕೆ ವ್ಯಾಪಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

2 ತಿಂಗಳ ಹಿಂದೆ ಮೆದುಲಿನಲ್ಲಿ ರಕ್ತಸ್ರಾವ ಉಂಟಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಇಸ್ಮಾಯಿಲ್ ಮೋನು ಉಪ್ಪಿನಂಗಡಿಯ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಚಿರಪರಿಚಿತರಾಗಿದ್ದರು.

ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವರ್ತಕರು ಭೇಟಿ ನೀಡಿ ಅಂತಿಮ ದಶನರ್ ಪಡೆದು ಸಂತಾಪ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ