ಮೇಕೆದಾಟು ಅಣೆಕಟ್ಟು ನಿರ್ಮಿಸಲು ಬಿಡಬಾರದು: ಟಿಎಂಸಿ ಆಗ್ರಹ

Update: 2017-08-22 12:21 GMT

ಕುಂಬಕೋಣಂ, ಆ.22: ಕಾವೇರಿ ನದಿಗೆ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕ ಸರಕಾರದ ಪ್ರಸ್ತಾವನೆಗೆ ತಮಿಳುನಾಡು ಸರಕಾರ ಅವಕಾಶ ನೀಡಬಾರದು ಎಂದು ತಮಿಳು ಮಾಣಿಲ ಕಾಂಗ್ರೆಸ್(ಟಿಎಂಸಿ) ಮುಖ್ಯಸ್ಥ ಜಿ.ಕೆ.ವಾಸನ್ ಹೇಳಿದ್ದಾರೆ.

ಇದೀಗ ಎಐಎಡಿಎಂಕೆಯ ಉಭಯ ಬಣಗಳು ಒಗ್ಗೂಡಿರುವ ಕಾರಣ ಸರಕಾರ ಮೇಕೆದಾಟು ಅಣೆಕಟ್ಟು ಸೇರಿದಂತೆ ವಿವಿಧ ವಿವಾದಗಳತ್ತ ಗಮನ ಹರಿಸಬೇಕು. ಏನೇ ಆದರೂ ಕರ್ನಾಟಕ ಸರಕಾರ ಮೇಕೆದಾಟು ಅಣೆಕಟ್ಟು ನಿರ್ಮಿಸದಂತೆ ತಡೆಯಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.

ತಮಿಳುನಾಡಿನಲ್ಲಿ ಆರಂಭಗೊಳ್ಳಲಿರುವ ಅಖಿಲಭಾರತ ವೈದ್ಯವಿಜ್ಞಾನ ಸಂಸ್ಥೆ(ಎಐಐಎಂಎಸ್)ಯನ್ನು ಬಹುಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಸ್ಥಾಪಿಸಬೇಕೆಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News