ನಟ ಜಗ್ಗೇಶ್ ಪುತ್ರನ ಮೇಲಿನ ಹಲ್ಲೆ ಪ್ರಕರಣ: ಆರೋಪಿ ಶಿವಶಂಕರ್ಗೆ ನಿರೀಕ್ಷಣಾ ಜಾಮೀನು ಮಂಜೂರು
Update: 2017-08-22 16:28 GMT
ಬೆಂಗಳೂರು, ಆ.21: ನಟ ಜಗ್ಗೇಶ್ ಅವರ ಪುತ್ರ ಗುರುರಾಜ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಶಿವಶಂಕರ್ಗೆ ನಗರದ 68ನೆ ಎಸಿಎಂಎಂ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ರಿಯಲ್ ಎಸ್ಟೇಟ್ ಉದ್ಯಮಿಯಾದ ಶಿವಶಂಕರ್, ಆಗಸ್ಟ್ 14ರಂದು ಆರ್.ಟಿ.ನಗರದ ಮಠದಹಳ್ಳಿ ಬಳಿ ಗುರುರಾಜ್ ಅವರ ತೊಡೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿ ಪರಾರಿಯಾಗಿದ್ದರು. ಬಳಿಕ ಶಿವಶಂಕರ್ ಅವರು ನಿರೀಕ್ಷಣಾ ಜಾಮೀನು ಕೋರಿ 68 ಎಸಿಎಂಎಂ ನ್ಯಾಯಾಲಯದ ಮೆಟ್ಟಿಲೇರಿದ್ದರು.