ಬೈಕ್ ಢಿಕ್ಕಿ: ನಿವೃತ್ತ ಸಬ್ ಇನ್ಸ್ಸ್ಪೆಕ್ಟರ್ ಮೃತ್ಯು
ಬೆಂಗಳೂರು, ಆ.27: ವೇಗವಾಗಿ ಬಂದ ಬೈಕೊಂದು ಪಾದಚಾರಿ ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸಬ್ ಇನ್ಸ್ಪೆಕ್ಟರ್ ಮೃತಪಟ್ಟ ಘಟನೆ ನೈಸ್ ರಸ್ತೆಯ ಕನಕಪುರ ಟೋಲ್ ಬಳಿ ನಡೆದಿದೆ.
ನಾಗರಬಾವಿ ರಂಗಸ್ವಾಮಿ (63) ಮೃತಪಟ್ಟ ಸಬ್ ಇನ್ಸ್ಸ್ಪೆಕ್ಟರ್ ಎಂದು ತಿಳಿದು ಬಂದಿದೆ.
ರಂಗಸ್ವಾಮಿ ಅವರು ರಾತ್ರಿ 8ರ ಸುಮಾರಿಗೆ ಪೂರ್ವಾಂಕರ ಡೆವಲಪರ್ಸ್ನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬೈಕ್ನಲ್ಲಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ಕನಕಪುರ ಟೋಲ್ ಬಳಿ ಬೈಕ್ ನಿಲ್ಲಿಸಿ ರಸ್ತೆ ದಾಟಿ ಮೂತ್ರ ಸರ್ಜನೆಗೆ ಹೋಗುತ್ತಿದ್ದಾಗ ಬೈಕ್ನಲ್ಲಿ ವೇಗವಾಗಿ ಬಂದ ಆದಿತ್ಯ ಎಂಬವರು ಇವರಿಗೆ ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ರಂಗಸ್ವಾಮಿ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಮೃತಪಟ್ಟರೆ, ಆದಿತ್ಯ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಮಡಿರುವ ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.