ಎಂ. ಕೇಶವ ಭಟ್
Update: 2017-08-29 16:09 GMT
ಪುತ್ತೂರು, ಆ. 29: ಇಲ್ಲಿನ ಸಂತ ಫಿಲೋಮಿನಾ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ನಗರದ ಕಲ್ಲಾರೆ ನಿವಾಸಿ ಎಂ. ಕೇಶವ ಭಟ್ ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.
ಮೂಲತಃ ಕೇರಳದ ಮಂಜೇಶ್ವರ ತಾಲೂಕಿನ ಪೈವಳಿಕೆ ಮಾಣಿಪ್ಪಾಡಿ ನಿವಾಸಿಯಾಗಿದ್ದು, ಕೇಶವ ಭಟ್ ಅವರು ಪುತ್ತೂರಿನ ಸಂತ ಫಿಲೋಮಿನಾ ಹೈಸ್ಕೂಲ್ನಲ್ಲಿ ಶಿಕ್ಷಕರಾಗಿ, ಮುಖ್ಯಗುರುಗಳಾಗಿ 30 ವಷರ್ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತರು ಪತ್ನಿ ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.