ಎ.ಸಿ.ಇಸಾಕ್

Update: 2017-09-02 14:41 GMT

ಮೂಡಿಗೆರೆ, ಸೆ.2: ಹಿರಿಯ ಕಾಫಿ ಬೆಳೆಗಾರ, ಕಾಂಗ್ರೆಸ್ ಮುಖಂಡ ಚಕ್ಕಮಕ್ಕಿ ಎ.ಸಿ.ಅಯ್ಯೂಬ್ ಹಾಜಿಯವರ ಸಹೋದರ ಎ.ಸಿ.ಇಸಾಕ್(56) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಿಧನರಾದರು.

ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಸಹಿತ ಅಒಆರ ಬಂಧು-ಬಳಗದವರನ್ನು ಅಗಲಿದ್ದಾರೆ. ಎ.ಸಿ.ಇಸಾಕ್ ಮಂಗಳೂರಿನಲ್ಲಿ ಖಾಸಗಿ ಬಸ್ ಹೊಂದಿದ್ದರು. ಶನಿವಾರ ಬೆಳಿಗ್ಗೆ ಚಕ್ಕಮಕ್ಕಿಗೆ ಪಾರ್ಥೀವ ಶರೀರವನ್ನು ತರಲಾಗಿದ್ದು, ನಂತರ ಅಂತಿಮ ದರ್ಶನಕ್ಕೆ ಸಾವಿರಾರು ಮಂದಿ ಆಗಮಿಸಿದರು. 

ಶಾಸಕ ಬಿ.ಬಿ.ನಿಂಗಯ್ಯ, ಸಕಲೇಶಪುರ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜೀತ್ ಕುಮಾರ್, ಜಿಪಂ ಮಾಜಿ ಸದಸ್ಯ ವಿ.ಕೆ.ಶಿವೇಗೌಡ, ಎಂ.ಎಸ್.ಅನಂತ್, ಕರ್ನಾಟಕ ರಾಜ್ಯ ಬ್ಯಾರೀ ಸಾಹಿತ್ಯ ಅಕಾಡೆಮಿ ಸದಸ್ಯ ಕಿರುಗುಂದ ಅಬ್ಬಾಸ್, ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಜಾಕೀರ್ ಹುಸೈನ್, ಜಿಲಗಲಾ ಬಿಎಸ್‍ಪಿ ಮುಖಂಡರಾದ ಲೋಕವಳ್ಳಿ ರಮೇಶ್, ಯು.ಬಿ.ಮಂಜಯ್ಯ, ಕೆ.ರಾಮು, ಪಿ.ಕೆ.ಮಂಜುನಾಥ್, ಮಲೆನಾಡು ಮುಸ್ಲಿಂ ವೇದಿಕೆ ಅಧ್ಯಕ್ಷ ಸಿ.ಕೆ.ಇಬ್ರಾಹೀಂ, ಮುಖಂಡರಾದ ಮಜೀದ್, ಶರೀಫ್, ಇಬ್ರಾಹೀಂ ಯಾದ್‍ಗಾರ್, ಜಿಲ್ಲಾ ಬ್ಯಾರೀಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಬಿ.ಎಚ್.ನೂರ್ ಮುಹಮ್ಮದ್, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ಬಿ.ಎಸ್.ಮುಹಮಮದ್, ಖಲಂದರಿಯ್ಯಾ ಅನಾಶ್ರಮದ ಸಂಸ್ಥಾಪಕ ಅಬ್ಬಾಸ್ ಚಕ್ಕಮಕ್ಕಿ ಮತ್ತಿತತರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ