ಬಂದೂಕಿನ ಮೂಲಕ ಧ್ವನಿಯನ್ನು ಅಡಗಿಸುವುದು ಚರ್ಚೆಯನ್ನು ಗೆಲ್ಲುವ ಅತಿ ಕೆಟ್ಟ ಹಾದಿಯಾಗಿದೆ: ಕಮಲ್ ಹಾಸನ್

Update: 2017-09-07 09:50 GMT

ಚೆನ್ನೈ, ಸೆ.7: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿರುವ ಖ್ಯಾತ ನಟ, ನಿರ್ದೇಶಕ ಕಮಲ್ ಹಾಸನ್, “ಬಂದೂಕಿನ ಮೂಲಕ ಧ್ವನಿಯನ್ನು ಅಡಗಿಸುವ ಪ್ರಯತ್ನ ಚರ್ಚೆಯನ್ನು ಗೆಲ್ಲುವ ಅತಿ ಕೆಟ್ಟ ಹಾದಿಯಾಗಿದೆ” ಎಂದವರು ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಕಮಲ್ ಹಾಸನ್ ಸಾಮಾಜಿಕ ಸಮಸ್ಯೆಗಳ ಬಗ್ಗೆ, ವಿಚಾರಗಳ ಬಗ್ಗೆ ಸದಾ ಚರ್ಚಿಸುತ್ತಿರುತ್ತಾರೆ. ಗೌರಿ ಲಂಕೇಶ್ ಅವರ ಹತ್ಯೆಯ ಸುದ್ದಿ ಕೇಳಿ ಆಘಾತಗೊಂಡಿದ್ದೆ ಎಂದಿದ್ದ ಅವರು ಈ ಹತ್ಯೆಯನ್ನು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News