ಬಿ.ವನಜಾಕ್ಷಿ

Update: 2017-09-17 15:55 GMT

ಮಣಿಪಾಲ, ಸೆ.17: ಹಿಂದಿ ಶಿಕ್ಷಕಿಯಾಗಿ ಜನಪ್ರಿಯರಾಗಿದ್ದ ಕಾರ್ಕಳದ ಬಿ. ವನಜಾಕ್ಷಿ(95) ರವಿವಾರ ನಿಧನರಾದರು.

ಇವರು ಏಕೈಕ ಪುತ್ರಿ ತರಂಗ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕಿ ಡಾ.ಯು.ಬಿ.ರಾಜಲಕ್ಷ್ಮಿ ಅವರನ್ನು ಅಗಲಿದ್ದಾರೆ.

ಕಾರ್ಕಳ, ಸಾಣೂರು, ಪೆರ್ವಾಜೆ ಶಾಲೆಗಳಲ್ಲಿ ಕನ್ನಡ ಶಿಕ್ಷಕಿಯಾಗಿದ್ದ ಇವರು, ಖಾಸಗಿಯಾಗಿ ಹಿಂದಿ ಕಲಿತು ಹಿಂದೀ ವಿಶಾರದ, ಹಿಂದಿ ಪ್ರವೀಣ ಪದವಿ ಗಳನ್ನು ಗಳಿಸಿ ಅಂದಿನ ಮದ್ರಾಸ್ ಪಾಂತ್ರ್ಯದ ಹಿಂದಿ ಪ್ರಚಾರ ಸಮಿತಿಯ ಸಕ್ರಿಯ ಕಾರ್ಯಕರ್ತೆ ಯಾಗಿದ್ದರು. ಮಂಗಳೂರಿನ ಬಲ್ಮಠ ಜ್ಯೂನಿಯರ್ ಕಾಲೇಜು, ಪ್ರಾಕ್ಟೀಸಿಂಗ್ ಹೈಸ್ಕೂಲ್, ಬೆಳ್ಮಣ್ಣು ಜ್ಯೂನಿಯರ್ ಕಾಲೇಜುಗಳಲ್ಲಿ ಹಿಂದಿ ಪಂಡಿತ್ ಆಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ