ಬೆಂಗಳೂರು: ಚಿನ್ನಾಭರಣ ಕಳವು
Update: 2017-09-21 20:30 IST
ಬೆಂಗಳೂರು, ಸೆ.21: ವ್ಯಕ್ತಿಯೊಬ್ಬರನ್ನು ಹಿಂಬಾಲಿಸಿ ಚಿನ್ನಾಭರಣ ಕಳವು ಮಾಡಿರುವ ಘಟನೆ ಇಲ್ಲಿನ ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕ ಉಪನಗರ ನಿವಾಸಿಯಾದ ವೆಂಕಟಪ್ಪರಾವ್(45) ಎಂಬುವರು ಯಲಹಂಕ ಉಪನಗರಕ್ಕೆ ಹೋಗಿ ಬುಧವಾರ ರಾತ್ರಿ 10ಗಂಟೆಯಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಇವರ ಹಿಂದಿನಿಂದ ಬಂದ ವ್ಯಕ್ತಿ ಬಸ್ ನಿಲ್ದಾಣ ಸಮೀಪ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.