ಸಾಮಾಜಿಕ ಚಿಂತನೆಗೆ ಪ್ರೊ.ವೀರಭದ್ರಪ್ಪ ಪ್ರೇರಕ ಶಕ್ತಿ: ಸಚಿವ ಎಚ್.ಆಂಜನೇಯ

Update: 2017-09-21 16:35 GMT

ಬೆಂಗಳೂರು, ಸೆ. 21: ವೈಚಾರಿಕತೆ ಹಾಗೂ ಸಾಮಾಜಿಕ ಚಿಂತನೆಗೆ ಪ್ರೇರಕ ಶಕ್ತಿಯಾಗಿದ್ದ ಹಿರಿಯ ವಿಚಾರವಾದಿ, ಪ್ರಖರ ಚಿಂತಕ ಪ್ರೊ.ಬಿ.ವಿ.ವೀರಭದ್ರಪ್ಪ ಅವರ ನಿಧನಕ್ಕೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್.ಆಂಜನೇಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸರಳ ಸಜ್ಜನಿಕೆಗೆ ಹೆಸರಾಗಿದ್ದ ಬಿ.ವಿ.ವೀರಭದ್ರಪ್ಪ ಅವರ ವೈಚಾರಿಕ ಬರಹಗಳು ನಾನು ಮತ್ತು ನನ್ನಂತಹ ಲಕ್ಷಾಂತರ ಮಂದಿಗೆ ಪ್ರೇರಕ ಶಕ್ತಿಯಾಗಿದ್ದು, ಪ್ರೊ.ಬಿ.ವಿ.ವಿ. ಅಗಲಿಕೆಯ ನೋವಿನಲ್ಲಿ ಕುಟುಂಬದ ಜತೆ ನಾನು ಕೂಡ ಭಾಗಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

ದಾವಣಗೆರೆಯ ಪ್ರಗತಿಪರರಿಗೆ ಸ್ಫೂರ್ತಿಯಾಗಿದ್ದ ಪ್ರೊ.ವೀರಭದ್ರಪ್ಪ ಅವರ ಶೋಷಿತರ ಪರ ಧ್ವನಿ ಎತ್ತಿದವರು. ಅವರ ಕೃತಿಗಳು ಸಮಾಜಕ್ಕೆ, ಅದರಲ್ಲೂ ವಿಶೇಷವಾಗಿ ಶೋಷಿತ ಸಮುದಾಯಕ್ಕೆ ದಾರಿದೀಪವಾಗಿವೆ ಎಂದು ಆಂಜನೇಯ ತಮ್ಮ ಸಂತಾಪ ಸೂಚನೆ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News