ಡಾ. ಪಿ.ಕೆ.ಐತಾಳ್

Update: 2017-10-02 15:23 GMT

ಮಂಗಳೂರು, ಅ.2: ಕಾಟಿಪಳ್ಳ ಪಣಂಬೂರಿನ ಜನಪ್ರೀಯ ವೈದ್ಯರಾಗಿದ್ದ ಡಾ. ಪಣಂಬೂರು ಕೃಷ್ಣ ಐತಾಳ್ (84) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಡಾ. ಕೃಷ್ಣ ಐತಾಳ್ 1956ರಲ್ಲಿ ಜಿಸಿಐಎಂ ಪದವಿಯನ್ನು ಕಿಲ್ಪಾಕಂ ವೈದ್ಯಕೀಯ ವಿಶ್ವ ವಿದ್ಯಾನಿಲಯದಿಂದ ಪಡೆದು ಮದ್ರಾಸು ಸರಕಾರದಲ್ಲಿ ಕೊಯಂಬ ತ್ತೂರು, ಈರೋಡ್‌ಗಳಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಕರ್ನಾಟಕದ ದಾಂಡೇಲಿಯಲ್ಲಿ ಸೇವೆ ಸಲ್ಲಿಸಿ ಬಳಿಕ ಕಾಟಿಪಳ್ಳ ಸುರತ್ಕಲ್ ಪರಿಸರದಲ್ಲಿ ಮನೆ ಮನೆಗೆ ತರಳಿ ಸೇವೆ ನೀಡುವ ಕುಟುಂಬ ವೈದ್ಯರಾಗಿ ಜನಪ್ರೀಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ