ರಾಜ್ಯ ಸರಕಾರದಿಂದಲೇ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ: ಸಚಿವೆ ಉಮಾಶ್ರೀ
Update: 2017-10-07 22:25 IST
ಬೆಂಗಳೂರು, ಅ. 7: ರಾಜ್ಯ ಸರಕಾರದ ವತಿಯಿಂದಲೇ ಪ್ರಸಕ್ತ ಸಾಲಿನಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಣೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಕಿತ್ತೂರಿನ ಮೇಲೆ ದಂಡೆತ್ತಿ ಬಂದ ಬ್ರಿಟಿಷರನ್ನು ಸದೆ ಬಡಿಯುವ ಮೂಲಕ ಮಹಿಳಾ ನಾಯಕತ್ವವನ್ನು ತೋರ್ಪಡಿಸಿದ ಮಹಾನ್ ನಾಯಕಿಯನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್ 23ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸಲು ಸರಕಾರ ನಿರ್ಧರಿಸಿದೆ ಎಂದು ಉಮಾಶ್ರೀ ಪ್ರಕಟನೆಯಲ್ಲಿ ಹೇಳಿದ್ದಾರೆ.
69 ಲಕ್ಷ ರೂ. ಮಂಜೂರು: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ರಾಜ್ಯ ಸರಕಾರದ ವತಿಯಿಂದಲೇ 176 ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಆಚರಿಸಲು 69 ಲಕ್ಷ ರೂ. ಮಂಜೂರು ಮಾಡಲಾಗಿದೆ. ಅಲ್ಲದೆ, ರಜಾ ರಹಿತ ಸರಕಾರಿ ಕಾರ್ಯಕ್ರಮ ಆಚರಣೆಗೆ ಆದೇಶಿಸಲಾಗಿದೆ.