ಹೊಂಡಗಳನ್ನು ಮುಚ್ಚಿಸಿ

Update: 2017-10-09 18:44 GMT

ಮಾನ್ಯರೆ,

ದಾವಣಗೆರೆ ನಗರದ ಹೆಚ್ಚಿನ ರಸ್ತೆಗಳು ಹೊಂಡ ಗುಂಡಿಗಳಿಂದ ತುಂಬಿವೆ. ಉದಾಹರಣೆಗೆ ನಗರದ ಕೆ. ಆರ್. ರಸ್ತೆ, ಸಿ. ಜಿ. ಹಾಸ್ಪಿಟಲ್ ರಸ್ತೆ ಮುಂತಾದವುಗಳು ತೀರಾ ಹದಗೆಟ್ಟಿವೆ. ಮಳೆ ಬಂದರೆ ಇಂತಹ ರಸ್ತೆಗಳ ಗುಂಡಿಗಳಲ್ಲಿ ನೀರು ತುಂಬಿಕೊಂಡು, ವಾಹನ ಚಾಲಕರಿಗೆ ಆ ಗುಂಡಿಗಳು ಕಾಣದಂತಾಗಿ, ಅಪಘಾತಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ.ಇಂತಹ ಗುಂಡಿಗಳನ್ನು ಇಲ್ಲಿನ ರಸ್ತೆಯ ಕಾಮಗಾರಿ ನಿರ್ವಹಿಸುವವರು ಮಣ್ಣಿನಿಂದ ಮುಚ್ಚುತ್ತಿದ್ದಾರೆ. ಇದು ಕೆಲ ದಿನಗಳು ಮಾತ್ರ ಇದ್ದು ನಂತರ ಮತ್ತೆ ಹೊಂಡಗಳು ಬಾಯ್ದೆರೆದುಕೊಳ್ಳುತ್ತವೆ. ಈ ಬಾರಿ ವರುಣನ ಅರ್ಭಟ ಜೋರಾಗಿದ್ದು, ರಸ್ತೆಗೆ ಹಾಕಿದ ಮಣ್ಣು ನೀರಿನಲ್ಲಿ ಕರಗಿ ಅಪಾಯಕ್ಕೆ ದಾರಿಯಾಗುತ್ತಿದೆ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಇಂತಹ ರಸ್ತೆಗಳನ್ನು ಕೂಡಲೇ ಡಾಮರೀಕರಣ ಮಾಡಿಸಿ, ವಾಹನಚಾಲಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.

Writer - -ತ್ಯಾಗರಾಜ್ ಸಿ. ದಾವಣಗೆರೆ

contributor

Editor - -ತ್ಯಾಗರಾಜ್ ಸಿ. ದಾವಣಗೆರೆ

contributor

Similar News