ಆಸಿಸ್ ಕ್ರಿಕೆಟಿಗರಿದ್ದ ಬಸ್ ಮೇಲೆ ಕಲ್ಲೆಸೆತ

Update: 2017-10-11 06:48 GMT

ಹೊಸದಿಲ್ಲಿ, ಅ.11: ಗುವಾಹಟಿಯಲ್ಲಿ ನಡೆದ 2ನೆ ಟಿ20 ಪಂದ್ಯದಲ್ಲಿ ಜಯಿಸಿದ ನಂತರ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸದಸ್ಯರು ತೆರಳುತ್ತಿದ್ದ ಬಸ್ ನ ಮೇಲೆ ಕಲ್ಲೆಸೆಯಲಾಗಿದೆ ಎಂದು ಆರೋನ್ ಫಿಂಚ್ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಬಾಂಗ್ಲಾದ ಚಿತ್ತಗಾಂಗ್ ನಲ್ಲಿ ಆಸಿಸ್ ಕ್ರಿಕೆಟಿಗರಿದ್ದ ಬಸ್ ನ ಮೇಲೆ ಕಲ್ಲೆಸೆದಿದ್ದ ಘಟನೆ ನಡೆದಿತ್ತು. “ಹೋಟೆಲ್ ಗೆ ಹಿಂತಿರುಗುತ್ತಿದ್ದಾಗ ಬಸ್ ನ ಕಿಟಕಿಗೆ ಕಲ್ಲೆಸೆಯಲಾಗಿತ್ತು” ಎಂದು ಫಿಂಚ್ ಟ್ವೀಟ್ ಮಾಡಿದ್ದರು.

ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ. ಒಡೆದ ಗಾಜಿನ ಕಿಟಕಿಯ ಸಮೀಪ ಯಾರೂ ಕುಳಿತಿರಲಿಲ್ಲ ಎಂದು ಆಸ್ಟ್ರೇಲಿಯಾ ನ್ಯೂಸ್ ಸೈಟ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News