ಚಿನ್ನಾಭರಣ ಕದ್ದ ಪ್ರಕರಣ: ಸೀರಿಯಲ್ ನಟಿಯ ಬಂಧನ
Update: 2017-10-18 14:34 GMT
ತಲಶ್ಶೇರಿ,ಅ.18: ಚಿನ್ನಾಭರಣ ಕದ್ದ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಸೀರಿಯಲ್ ನಟಿಯೊಬ್ಬರನ್ನು ಬಂಧಿಸಲಾಗಿದೆ. ಸೀರಿಯಲ್ ನಟಿ ಕಲ್ಲಿಕೋಟೆಯ ನಿವಾಸಿ ತನುಜಾ(24) ಎಂಬವರನ್ನು ತಲಶ್ಶೇರಿಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಕನಕಪುರದ ರಘುವನ ಹಳ್ಳಿಯಲ್ಲಿ ವಾಸವಿದ್ದ ಪಯ್ಯನ್ನೂರಿನ ನಿವಾಸಿಯೊಬ್ಬರ ಮನೆಯಿಂದ ಸೆಪ್ಟಂಬರ್ 28ರಂದು 35 ಪವನ್ ಚಿನ್ನಾಭರಣಗಳನ್ನು ಕದ್ದು ತನುಜಾ ಪರಾರಿಯಾಗಿದ್ದರು ಎನ್ನಲಾಗಿದೆ.
ಮಲಯಾಳಂನ ಕೆಲವು ಸೀರಿಯಲ್ಗಳಲ್ಲಿ ನಟಿಸಿದ್ದ ತನುಜಾ ಆಗಸ್ಟ್ ತಿಂಗಳಲ್ಲಿ ಪಯ್ಯನ್ನೂರಿನ ನಿವಾಸಿ ಮತ್ತು ಕರ್ನಾಟಕದ ಆರೋಗ್ಯ ಇಲಾಖೆಯ ಉದ್ಯೋಗಿಯ ಮನೆಗೆ ಕೆಲಸಕ್ಕೆ ಸೇರಿದ್ದಳು. ಮನೆಯವರ ವಿಶ್ವಾಸ ಗಳಿಸಿದ ಬಳಿಕ ತನುಜಾ ಸೆಪ್ಟಂಬರ್ 28ರಿಂದ ಕಾಣೆಯಾಗಿದ್ದಳು. ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಹೋಗಿರುವುದು ಗೊತ್ತಾಗಿದ್ದರಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ತನುಜಾರನ್ನು ಬಂಧಿಸಿದ್ದಾರೆ.