ಬ್ರಿಟಿಷರ ವಿರುದ್ಧ ಹೋರಾಡಲು ಸಾವರ್ಕರ್ 6 ಬಾರಿ ಅವರ ಕ್ಷಮೆ ಯಾಚಿಸಿದ್ದರು ಎಂದ ಬಿಜೆಪಿ ನಾಯಕ!

Update: 2017-10-27 14:02 GMT

ಕೊಚ್ಚಿ, ಅ.27: ಟಿವಿ ಡಿಬೇಟ್ ಒಂದರಲ್ಲಿ ಮಾತನಾಡುತ್ತಿದ್ದ ಸಂದರ್ಭ ಕೇರಳ ಬಿಜೆಪಿಯ ವಕ್ತಾರ ಜೆ.ಆರ್. ಪದ್ಮಕುಮಾರ್ ಎಂಬವರು ನೀಡಿರುವ ಹೇಳಿಕೆಯೊಂದು ಕೇರಳಿಗರಿಗೆ ಹಾಸ್ಯದ ವಸ್ತುವಾಗಿಬಿಟ್ಟಿದೆ.

ಮನೋರಮ ನ್ಯೂಸ್ ಚಾನೆಲ್ ನಲ್ಲಿ ನಡೆಯುತ್ತಿದ್ದ ಚರ್ಚೆಯ ಸಂದರ್ಭ ಪದ್ಮಕುಮಾರ್ ಗೆ ಆ್ಯಂಕರ್, “ಬ್ರಿಟಿಷರೊಂದಿಗೆ ಕ್ಷಮೆ ಯಾಚಿಸಿದ ನಾಯಕ ಯಾವ ಸಂಘಟನೆಯವರು”  ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭ ಇದಕ್ಕೆ ಪ್ರತಿಕ್ರಿಯಿಸಿದ ಪದ್ಮಕುಮಾರ್, “ಸಾವರ್ಕರ್ ಅವರ ಜೀವನದ ಮುಖ್ಯ ಉದ್ದೇಶ ಬ್ರಿಟಿಷರ ವಿರುದ್ಧ ಹೋರಾಟ ನಡೆಸುವುದೇ ಆಗಿತ್ತು.  ಆದ್ದರಿಂದ ಅವರು 6 ಬಾರಿ ಬ್ರಿಟಿಷರೊಂದಿಗೆ ಕ್ಷಮೆ ಯಾಚಿಸಿದರು ಹಾಗು ಬ್ರಿಟಿಷರ ವಿರುದ್ಧ ಹೋರಾಡಿದರು” ಎಂದಿದ್ದಾರೆ.

ಬಿಜೆಪಿ ನಾಯಕನ ಈ ಪ್ರತಿಕ್ರಿಯೆ ಆ್ಯಂಕರ್ ಸೇರಿದಂತೆ ಚರ್ಚೆಯಲ್ಲಿ ಪಾಲ್ಗೊಂಡವರೆಲ್ಲರೂ ನಕ್ಕು ಸುಮ್ಮನಾಗಿದ್ದಾರೆ. ಆದರೆ ಮಲಯಾಳಿ ಮೀಮ್ಸ್ ಗಳಿಗೆ ಪದ್ಮಕುಮಾರ್ ಅವರ ಹೇಳಿಕೆ ಆಹಾರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೊಟ್ಟೆ ಹುಣ್ಣಾಗಿಸುವಂತಹ ಟ್ರೋಲ್ ಗಳು, ಮೀಮ್ಸ್ ಗಳು ವೈರಲ್ ಆಗುತ್ತಿದ್ದು, ಅದರಲ್ಲಿನ ಕೆಲ ಸ್ಯಾಂಪಲ್ ಗಳು ಇಲ್ಲಿವೆ…

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News