ಚಾಂಪಿಯನ್ಸ್ ಟ್ರೋಫಿ ಬಹುಮಾನ ಮೊತ್ತ ಸ್ವೀಕರಿಸಿದ ಭಾರತ

Update: 2017-11-08 18:08 GMT

ಹೊಸದಿಲ್ಲಿ, ನ.8: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್ಸ್-ಅಪ್ ಪ್ರಶಸ್ತಿ ಪಡೆದಿದ್ದ ಭಾರತ ಕ್ರಿಕೆಟ್ ತಂಡದ ಸದಸ್ಯರು ಬಹುಮಾನ ಮೊತ್ತ ತಲಾ 38.67 ಲಕ್ಷ ರೂ. ಸ್ವೀಕರಿಸಿದ್ದಾರೆ. ಆಟಗಾರರಿಗೆ, ಕೋಚಿಂಗ್ ಸಿಬ್ಬಂದಿ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ನೀಡಿರುವ ವೇತನ ಪಾವತಿಯ ವಿವರವನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಪ್ರಧಾನ ಕೋಚ್ ರವಿ ಶಾಸ್ತ್ರಿಗೆ ಅಕ್ಟೋಬರ್ 18 ಹಾಗೂ ಜ.17ರ ವರೆಗಿನ ಮೂರು ತಿಂಗಳ ಅವಧಿಗೆ 2.02 ಕೋ.ರೂ. ವೇತನ ಪಾವತಿಸಲಾಗಿದೆ. ಬೌಲಿಂಗ್ ಕೋಚ್ ಭರತ್ ಅರುಣ್‌ಗೆ 26.99 ಲಕ್ಷ ರೂ. ನೀಡಲಾಗಿದೆ. ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿಗೆ ವನ್ ಟೈಮ್ ಬೆನಿಫಿಟ್ ಯೋಜನೆಯಲ್ಲಿ 50 ಲಕ್ಷ ರೂ. ಪಾವತಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಋತುವಿನ ಆದಾಯ ಹಂಚಿಕೆಯಲ್ಲಿ 19.44 ಲಕ್ಷ ರೂ. ಸ್ವೀಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News