ರಣಜಿಯಲ್ಲಿ ರನ್ ಬರ ಎದುರಿಸುತ್ತಿರುವ ರೆನಾ
Update: 2017-11-09 18:09 GMT
ಹೊಸದಿಲ್ಲಿ, ನ.9: ಭಾರತದ ಎಡಗೈ ಬ್ಯಾಟ್ಸ್ಮನ್ ಹಾಗೂ ಶ್ರೇಷ್ಠ ಫೀಲ್ಡರ್ ಸುರೇಶ್ ರೈನಾಗೆ ಟೀಮ್ ಇಂಡಿಯಾಕ್ಕೆ ಮರಳಲು ರಣಜಿ ಟ್ರೋಫಿ ಅತ್ಯಂತ ಮುಖ್ಯವಾಗಿತ್ತು. ಉತ್ತರಪ್ರದೇಶ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿರುವ ರೈನಾ ಪ್ರಸ್ತುತ ರನ್ ಬರ ಎದುರಿಸುತ್ತಿದ್ದಾರೆ.
ದುಲೀಪ್ ಟ್ರೋಫಿಯಲ್ಲಿ ಕೇವಲ ಒಂದು ಅರ್ಧಶತಕ ಬಾರಿಸಿದ್ದ ರೈನಾ ಸಾಕಷ್ಟು ಮ್ಯಾಚ್ ಪ್ರಾಕ್ಟೀಸ್ನೊಂದಿಗೆ ರಣಜಿ ಪಂದ್ಯಗಳನ್ನು ಆಡಲು ಬಂದಿದ್ದರು. ರೈಲ್ವೇಸ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಗೆಲುವಿಗೆ 92 ರನ್ ಗುರಿ ಪಡೆದಿದ್ದ ಉತ್ತರಪ್ರದೇಶ 72 ರನ್ಗೆ ಆಲೌಟಾಗಿತ್ತು. ರೈನಾ ಎರಡು ಇನಿಂಗ್ಸ್ಗಳಲ್ಲಿ 6 ಹಾಗೂ 29 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಆ ಬಳಿಕ ಐದು ರಣಜಿ ಟ್ರೋಫಿ ಇನಿಂಗ್ಸ್ಗಳಲ್ಲಿ 0,5,10,16,6 ರನ್ ಗಳಿಸಿದ್ದಾರೆ. ಪ್ರಸ್ತುತ ಗುವಾಹಟಿಯಲ್ಲಿ ಅಸ್ಸಾಂ ವಿರುದ್ಧ ರಣಜಿ ಪಂದ್ಯ ಆಡುತ್ತಿರುವ ರೈನಾ ಕೇವಲ 6 ರನ್ ಗಳಿಸಿ ಅಬು ನೇಚಿಮ್ಗೆ ವಿಕೆಟ್ ಒಪ್ಪಿಸಿದ್ದಾರೆ.