ಮುತಾಲಿಕರನ್ನು ಅನುಸರಿಸುತ್ತಿರುವ ಪ್ರಮೋದ್

Update: 2017-11-13 18:34 GMT

ಮಾನ್ಯರೆ,

ಸಚಿವ ಪ್ರಮೋದ್ ಮಧ್ವರಾಜ್ ಕಳೆದ ಎರಡು ವರ್ಷಗಳಂತೆ ಈ ಬಾರಿಯೂ ಉಡುಪಿಯಲ್ಲಿ ಜರುಗಿದ ಟಿಪ್ಪುಜಯಂತಿ ಕಾರ್ಯಕ್ರಮವನ್ನು ಕಾರ್ಯತಃ ಬಹಿಷ್ಕರಿಸಿದ್ದಾರೆ. ಸಾಲದ್ದಕ್ಕೆ, ಈ ಕುರಿತು ಸ್ಪಷ್ಟೀಕರಣ ಕೇಳಿದವರಿಗೆ ತೀರಾ ಉಡಾಫೆಯ ಉದ್ಧಟ ಉತ್ತರ ನೀಡಿದ್ದಾರೆ. ಇವರು ಜಾತ್ಯತೀತ ತತ್ವಾದರ್ಶಗಳಲ್ಲಿ ವಿಶ್ವಾಸವುಳ್ಳ ಯುವ ನಾಯಕ ಎಂದು ನಂಬಿ ಇವರನ್ನು ಬೆಂಬಲಿಸಿದ್ದ ಎಲ್ಲ ಮತದಾರರಿಗೆ ಇದರಿಂದ ತೀವ್ರ ನಿರಾಶೆಯಾಗಿದೆ. ಕಾಂಗ್ರೆಸ್ ಪಕ್ಷದ ಆಶ್ರಯದಲ್ಲಿ ಶಾಸಕರಾಗಿ ಆ ಬಳಿಕ ಸಚಿವರಾದ ಪ್ರಮೋದ್‌ರಿಗೆ ಮಹಾನ್ ದೇಶ ಭಕ್ತ ಹಾಗೂ ಸ್ವಾತಂತ್ರ ಹೋರಾಟಗಾರರಾಗಿದ್ದ ಟಿಪ್ಪುವಿನ ಮೇಲೆ ಅಷ್ಟೊಂದು ದ್ವೇಷ ಏಕೆ ಎಂದು ಜನರಿಗೆ ಅರ್ಥವಾಗುತ್ತಿಲ್ಲ. ಇವರು ಬಿಜೆಪಿ ಸೇರಲಿದ್ದಾರೆ ಎಂಬ ದಟ್ಟ ವದಂತಿಗಳು ಚಲಾವಣೆಯಲ್ಲಿರುವಾಗಲೇ ಇವರು ಈ ರೀತಿ ಬಜರಂಗಿ ಧೋರಣೆಯನ್ನು ಪ್ರದರ್ಶಿಸುವ ಮೂಲಕ ಪ್ರಸ್ತುತ ವದಂತಿಗಳಿಗೆ ಮತ್ತಷ್ಟು ಬಲ ಒದಗಿಸಿದ್ದಾರೆ. ಒಟ್ಟಿನಲ್ಲಿ ಇವರ ಮೇಲೆ ನಂಬಿಕೆ ಇಟ್ಟು ಇವರನ್ನು ಬೆಂಬಲಿಸಿದ ಮತದಾರರು ನಾವೇನು ಪ್ರಮೋದ್ ಮುತಾಲಿಕ್ ರಿಗೆ ಮತ ನೀಡಿದ್ದೇವೆಯೇ ಎಂದು ಸಂಶಯಿಸುವಂತಾಗಿದೆ. 

Writer - - ಶಿರೀಶ್ ಪಿಂಟೋ, ಉಡುಪಿ

contributor

Editor - - ಶಿರೀಶ್ ಪಿಂಟೋ, ಉಡುಪಿ

contributor

Similar News