ಬಾಬಾ

Update: 2017-11-19 18:44 GMT
Editor : -ಮಗು

ಅದಾವುದೋ ರೋಗ ಬಡಿದು, ಆಸ್ಪತ್ರೆಯಲ್ಲಿ ವೈದ್ಯರೊಬ್ಬರಿಂದ ಜೀವ ಉಳಿಸಿಕೊಂಡ ಆತ, ವೈರಾಗ್ಯದಿಂದ ಸನ್ಯಾಸ ಸ್ವೀಕರಿಸಿ, ಗಡ್ಡ ಬಿಟ್ಟು, ಈಗ ಮಂತ್ರಿಸಿದ ಬೂದಿಯಿಂದ ಕ್ಯಾನ್ಸರ್‌ಗೆ ಮದ್ದು ಕೊಡುತ್ತಿದ್ದಾನೆ. ಹೀಗಿರುವಾಗ ಕ್ಯಾನ್ಸರ್ ಪೀಡಿತನೊಬ್ಬ ರೋಗದಿಂದ ನರಳಿ, ಜೀವ ಉಳಿಸುವ ಕೊನೆಯ ಪ್ರಯತ್ನವಾಗಿ ಆ ಆಶ್ರಮದ ಬಾಗಿಲು ಬಡಿದ.
ಬಾಗಿಲು ತೆರೆದ ಬಾಬಾ ಕಕ್ಕಾ ಬಿಕ್ಕಿ. ಎದುರುಗಡೆ ತನ್ನ ಜೀವ ಉಳಿಸಿದ ಡಾಕ್ಟರ್ ನಿಂತಿದ್ದಾನೆ.
ಆತನ ಗುರುತು ಹಿಡಿದ ವೈದ್ಯ ಕುಸಿದು ಬಿದ್ದ. ಮತ್ತೆಂದೂ ಅವನಿಗೆ ಕ್ಯಾನ್ಸರ್ ನೋವು ಕೊಡಲಿಲ್ಲ.
ಬಾಬಾನ ಆಶ್ರಮಕ್ಕೆ ವೈದ್ಯ ಭೇಟಿ ನೀಡಿದ್ದು ಊರಿಡೀ ಸುದ್ದಿಯಾಯಿತು. ಆದರೆ ಆತ ಕುಸಿದು ಸತ್ತು ಹೋದ ಕಾರಣ ಸುದ್ದಿಯಾಗಲಿಲ್ಲ.

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !