ನ.28 ರಿಂದ ‘ಶಿಕಾರಿ’ ನಾಟಕ ಪ್ರದರ್ಶನ

Update: 2017-11-20 13:43 GMT

ಬೆಂಗಳೂರು, ನ.20: ರಂಗಾಯಣ ಅಭಿನಯಿಸಿರುವ ಯಶವಂತ ಚಿತ್ತಾಲರ ಕಾದಂಬರಿ ಆಧಾರಿತ, ಪ್ರಕಾಶ್ ಬೆಳವಾಡಿ ನಿರ್ದೇಶನದ ‘ಶಿಕಾರಿ’ ನಾಟಕ ನ.28 ಮತ್ತು 29 ರಂದು ನಗರದ ರಂಗಶಂಕರದಲ್ಲಿ ಪ್ರದರ್ಶನವಾಗಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ, ಕಾರ್ಪೊರೇಟ್ ಬದುಕಿನ ಗೊಂಡಾರಣ್ಯದ ಚಕ್ರವ್ಯೆಹದಲ್ಲಿ ನಮ್ಮನ್ನು ಸುತ್ತಿಸುವ ಚಿತ್ತಾಲರು ಬಾಲ್ಯದ ಕರಾಳ ನೆನಪುಗಳನ್ನು ಹೊತ್ತ, ಪ್ರಾಮಾಣಿಕವಾಗಿ ಬದುಕಲೆತ್ನಿಸುವ ತಲ್ಲಣಗಳನ್ನು ನಮ್ಮದೇ ಎಂದು ಈ ನಾಟಕ ತೋರಿಸುತ್ತಿದೆ. ನಿರಾಳ ಸರಳತೆಯನ್ನು ಧಿಕ್ಕರಿಸಿ, ಪಕ್ಕದ ಜೀವವನ್ನು ತುಳಿಯುವುದನ್ನೇ ಬದುಕಿನ ಪರಮ ಧರ್ಮವನ್ನಾಗಿ ಮಾಡಿಕೊಂಡ ಆಧುನಿಕ ಜಗತ್ತಿನ ಪಾಶವೀಯ ಮುಖಕ್ಕೆ ನಾಟಕ ಕನ್ನಡಿ ಹಿಡಿಯಲಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News