ಹುಂಡೇಕರ್ ನಿಧನಕ್ಕೆ ಸಿಎಂ ಶೋಕ

Update: 2017-11-20 15:58 GMT

ಬೆಂಗಳೂರು, ನ.20: ರಾಜ್ಯದ ಎರಡನೆಯ ತಾಲೂಕು ಪುನಾರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಟಿ.ಎಂ.ಹುಂಡೇಕರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದಾಮಯ್ಯ ಶೋಕ ವ್ಯಕ್ತಪಡಿಸಿದ್ದಾರೆ.

ಪರಿಣಾಮಕಾರಿ ಹಾಗೂ ಸಮರ್ಥ ಆಡಳಿತಕ್ಕೆ ತಾಲೂಕುಗಳ ಪುನಾರಚನೆಯಾಗಬೇಕು ಎಂಬುದನ್ನು ಪ್ರತಿಪಾದಿಸುತ್ತಿದ್ದ ಹುಂಡೇಕರ್ ಅತ್ಯಂತ ವಿವರವಾಗಿ ಹಾಗೂ ವೈಜ್ಞಾನಿಕವಾಗಿ ತಾಲೂಕಗಳ ಪುನಾರಚನಾ ವರದಿಯನ್ನು ರಚಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮುಖ್ಯಮಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News