ಚರಂಡಿಗಳ ಬಗ್ಗೆಯೂ ಗಮನವಿರಲಿ

Update: 2017-11-22 18:33 GMT

ಮಾನ್ಯರೆ,

ಮಂಗಳೂರು ಹಳೆ ಬಂದರು ರಸ್ತೆ (ಹ್ಯಾಮಿಲ್ಟನ್ ವೃತ್ತದಿಂದ)ಯನ್ನು ಕಾಂಕ್ರಿಟೀಕರಣ ಮಾಡಲು ರಾಜ್ಯ ಸರಕಾರದಿಂದ ಒಂದು ಕೋಟಿ ರೂ. ಮಂಜೂರಾಗಿ ಇತ್ತೀಚೆಗೆ ಗುದ್ದಲಿ ಪೂಜೆ ನಡೆದಿದೆ. ಈ ರಸ್ತೆ ಹೊಂಡಗುಂಡಿಗಳಿಂದ ತುಂಬಿ ವಾಹನ ಹಾಗೂ ಜನ ಸಂಚಾರಕ್ಕೆ ಕಷ್ಟಕರವೆನಿಸಿತ್ತು. ಈಗ ಕಾಂಕ್ರಿಟೀಕರಣವಾಗವುದರಿಂದ ರಸ್ತೆಯ ಸಮಸ್ಯೆ ಪರಿಹಾರವಾಗುತ್ತದೆ. ಆದರೆ ಹಳೆ ಬಂದರಿನ ಇತರ ರಸ್ತೆಗಳು ಕೂಡಾ ತೀವ್ರ ಹದಗೆಟ್ಟಿರುವುದಲ್ಲದೆ ದಾರಿಯುದ್ದಕ್ಕೂ ಇರುವ ಚರಂಡಿಯಲ್ಲಿ ಕೊಳಚೆ ನೀರು ತಂಬಿದ್ದು, ಸಾಕಷ್ಟು ದೂರದವರೆಗೆ ಇದರ ದುರ್ನಾತ ಮೂಗಿಗೆ ಬಡಿಯುತ್ತಿದೆ.
ಹಾಗಾಗಿ ಇಲ್ಲಿನ ರಸ್ತೆಗಳನ್ನು ವ್ಯವಸ್ಥಿತಗೊಳಿಸುವುದರ ಜೊತೆಗೆ ಚರಂಡಿಗಳ ಬಗ್ಗೆಯೂ ಗಮನಹರಿಸಿದರೆ ಜನರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿದಂತಾದೀತು.

Writer - -ಜೆ.ಎಫ್.ಡಿ’ಸೋಜಾ, ಅತ್ತಾವರ

contributor

Editor - -ಜೆ.ಎಫ್.ಡಿ’ಸೋಜಾ, ಅತ್ತಾವರ

contributor

Similar News