ಭಾರತಕ್ಕೆ ಆರಂಭಿಕ ಆಘಾತ: ಧವನ್ 0, ಕಾರ್ತಿಕ್ 0, ರೋಹಿತ್ 2, ಪಾಂಡೆ 2, ಅಯ್ಯರ್ 9
Update: 2017-12-10 08:25 GMT
ಧರ್ಮಶಾಲಾ, ಡಿ.10: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂದು ಭಾರತ ಆರಂಭಿಕ ಆಘಾತ ಅನುಭವಿಸಿದ್ದು, ಐದು ವಿಕೆಟ್ಗಳನ್ನು ಬೇಗನೇ ಕಳೆದುಕೊಂಡಿದೆ.
ಆರಂಭಿಕ ದಾಂಡಿಗ ಶಿಖರ್ ಧವನ್(0) ಅವರನ್ನು ಖಾತೆ ತೆರೆಯಲು ಅವಕಾಶ ನೀಡಿದೆ ಮ್ಯಾಥ್ಯೂಸ್ ಎಲ್ಬಿಡಬ್ಲು ಬಲೆಗೆ ಕೆಡವಿದ್ದಾರೆ. ನಾಯಕ ರೋಹಿತ್ ಶರ್ಮಾ 2 ರನ್, ಮನೀಷ್ ಪಾಂಡೆ 2 ರನ್ ಮತ್ತು ದಿನೇಶ್ ಕಾರ್ತಿಕ್ (0) ಖಾತೆ ತೆರೆಯದೆ ಲಕ್ಮಲ್ಗೆ ವಿಕೆಟ್ ಒಪ್ಪಿಸಿದ್ದಾರೆ. ಶ್ರೇಯಸ್ ಅಯ್ಯರ್ 9 ರನ್ ಗಳಿಸಿ ಪ್ರದೀಪ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಭಾರತ ಕ್ರಿಕೆಟ್ ತಂಡ 15 ಓವರ್ಗಳ ಮುಕ್ತಾಯಕ್ಕೆ 5 ವಿಕೆಟ್ ನಷ್ಟದಲ್ಲಿ 27 ರನ್ ಗಳಿಸುವ ಮೂಲಕ ಕಳಪೆ ಪ್ರದರ್ಶನ ನೀಡಿದೆ. ಎಂಎಸ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ತಂಡವನ್ನು ಆಧರಿಸಿದ್ದಾರೆ.