ಕಾರು ಢಿಕ್ಕಿ: ಅರ್ಚಕ ಮೃತ್ಯು

Update: 2017-12-10 12:49 GMT

ಬೆಂಗಳೂರು,ಡಿ.10: ಶರವೇಗವಾಗಿ ಚಲಿಸುತ್ತಿದ್ದ ಕಾರೊಂದು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಧುರೆ ಶ್ರೀಶನೇಶ್ವರ ದೇಗುಲದ ಅರ್ಚಕ ಸಾವನ್ನಪ್ಪಿರುವ ಘಟನೆ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ 4ರ ದೇವಣ್ಣನಪಾಳ್ಯದ ಬಳಿ ನಡೆದಿದೆ.

ನೆಲಮಂಗಲದ ದೊಡ್ಡಬಳ್ಳಾಪುರ ರಸ್ತೆಯ ಮಧುರೆ ಶ್ರೀಶನೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ಕುರುಬರಹಳ್ಳಿ ಗೋಪಿನಾಥ್(46) ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಅವರು ರಾತ್ರಿ 11ರ ವೇಳೆ ಪೂಜೆ ಮುಗಿಸಿಕೊಂಡು ಮಧುರೆಯಿಂದ ಕುರುಬರಹಳ್ಳಿಯ ಮನೆಗೆ ವೇಗವಾಗಿ ಕಾರಿನಲ್ಲಿ ಬರುತ್ತಿದ್ದಾಗ ಮಾರ್ಗ ಮಧ್ಯೆ ರಾಷ್ಟ್ರೀಯ ಹೆದ್ದಾರಿ 4ರ ದೇವಣ್ಣನಪಾಳ್ಯದ ಬಳಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದ್ದಾರೆ. ಈ ರಭಸಕ್ಕೆ ಕಾರು ಜಖಂಗೊಂಡು ಗೋಪಿನಾಥ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನೆಲಮಂಗಲ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News