ಗಿರಿಜಮ್ಮ

Update: 2017-12-13 17:01 GMT

ಕೋಲಾರ,ಡಿ.13: ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕದರೀಪುರದ ಜಮೀನ್ದಾರ್ ಲೇಟ್ ಕೆ.ವಿ.ವೆಂಕಟನಾರಾಯಣ ಅವರ ಧರ್ಮಪತ್ನಿ ಗಿರಿಜಮ್ಮ(88)ವಿಧಿವಶರಾಗಿದ್ದು, ಅಂತ್ಯಸಂಸ್ಕಾರ ಅವರ ಸ್ವಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು.

ಮೃತರು ಐವರು ಪುತ್ರರಾದ ಕೆ.ವಿ.ವೆಂಕಟಾಚಲಪತಿ, ಕೆ.ವಿ.ಜಗದೀಶ್, ಪಾರ್ಥಸಾರಥಿ, ಶ್ರೀನಿವಾಸನ್, ವಿದ್ಯಾಶಂಕರ್,ಪುತ್ರಿಯರಾದ ಭವಾನಿ, ರಮಾ,ಸಾವಿತ್ರಿ,ಲಲಿತಾ ಸೇರಿದಂತೆ ಬಂಧುಬಳಗವನ್ನು ಅಗಲಿದ್ದಾರೆ.

ಕದಿರಿಪುರದಲ್ಲಿ  ನಡೆದ ಅಂತ್ಯಸಂಸ್ಕಾರದಲ್ಲಿ ಬಂಧುಗಳು ಸೇರಿದಂತೆ ಸುತ್ತಮುತ್ತಲ ನೂರಾರು ಮಂದಿ ಪಾಲ್ಗೊಂಡು ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ