ಮುಂಬೈ ಮಳಿಗೆಯಲ್ಲಿ ಬೆಂಕಿ ಅವಘಡ : 12 ಮಂದಿ ಮೃತ್ಯು

Update: 2017-12-18 06:24 GMT

ಮುಂಬೈ, ಡಿ. 18: ನಗರದ ಅಂಧೇರಿ (ಪೂರ್ವ) ಪ್ರದೇಶದ ಸಾಕಿನಾಕ ಎಂಬಲ್ಲಿನ ತಿಂಡಿ ತಯಾರಿಕಾ ಮಳಿಗೆಯೊಂದಕ್ಕೆ ಬೆಂಕಿ ಹತ್ತಿದ ಪರಿಣಾಮ ಕನಿಷ್ಠ 12 ಮಂದಿ ಮೃತಪಟ್ಟಿದ್ದು, ಕಟ್ಟಡ ಕುಸಿದು ಬಿದ್ದ ಪರಿಣಾಮ ಇನ್ನೂ ಹಲವರು ಅದರ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆಂದು ತಿಳಿದು ಬಂದಿದೆ.

ಭಾನು ಫರ್ಸಾನ್ ಎಂಬ ಈ ತಿಂಡಿ ತಯಾರಿಕಾ ಅಂಗಡಿಯಲ್ಲಿ ಬೆಳಗ್ಗಿನ ಜಾವ ಸುಮಾರು 4.15ಕ್ಕೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯನ್ನು 30 ನಿಮಿಷಗಳೊಳಗೆ ನಂದಿಸಲಾಗಿದ್ದರೂ, ಕಟ್ಟಡ ಕುಸಿದ ಪರಿಣಾಮ ಹಲವರು ಅದರೊಳಗೆ ಸಿಲುಕಿಕೊಂಡಿದ್ದಾರೆ.

ಹತ್ತರಿಂದ ಹದಿನೈದು ಮಂದಿ ಈ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಐದರಿಂದ ಆರು ಮಂದಿ ಅವಶೇಷಗಳಡಿ ಇರಬಹುದೆಂದು ಅಂದಾಜಿಸಲಾಗಿದೆ. ಮಳಿಗೆಯಲ್ಲಿದ್ದ ತಿಂಡಿ, ಪೀಠೋಪಕರಣಗಳೆಲ್ಲವೂ ಬೆಂಕಿಗೆ ಆಹುತಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News