ಕೆರೆಮಠ ವಾಮನ ಭಟ್
Update: 2018-01-10 17:26 GMT
ಉಡುಪಿ, ಜ.10: ಕೆರೆಮಠ ವಾಮನ ಭಟ್ (81) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು.
ಅವರು ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರು ಕೊಡವೂರು ವಿಪ್ರ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಉಡುಪಿ ತಾಲೂಕು ಕಚೇರಿ, ಬಿಡಿಒ ಕಚೇರಿ ಹಾಗೂ ಮಂಗಳೂರಿನ ಡಿಸಿ ಕಚೇರಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.