​ಎಂಆರ್‌ಎಚ್‌ಎಸ್ ರಾಜ್ಯಾಧ್ಯಕ್ಷರಾಗಿ ಪರಶುರಾಮ ಆಯ್ಕೆ

Update: 2018-01-21 16:56 GMT

ಬೆಂಗಳೂರು, ಜ. 21: ಮಾದಿಗ ಮೀಸಲಾತಿ ಹೋರಾಟ ಸಮಿತಿ ನೂತನ ರಾಜ್ಯಾಧ್ಯಕ್ಷರಾಗಿ ಪರಶುರಾಮ ಮರೇಗುದ್ದಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಯ ಅಕ್ಕರಕಿ ಆಯ್ಕೆ ಮಾಡಲಾಗಿದೆ.

ರವಿವಾರ ಇಲ್ಲಿನ ಶಾಸಕರ ಭವನದಲ್ಲಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಬಿ.ಎ. ಕೇಶವಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಎಲ್ಲ ಜಿಲ್ಲಾಧ್ಯಕ್ಷರ ಸಭೆಯಲ್ಲಿ ನ್ಯಾಯವಾದಿ ಎಸ್.ಮಾರಪ್ಪ ಹಾಗೂ ಕೇಶವಮೂರ್ತಿ ಅವರನ್ನು ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ರಾಜ್ಯ ಉಪಾಧ್ಯಕ್ಷರನ್ನಾಗಿ ಭಾನುಪ್ರಸಾದ, ಮುರಗೇಶ ಡಿ.ಕಂಬನ್ನವರ, ಕೃಷ್ಣ ಮಾಗಡಿ, ಕಾರ್ಯದರ್ಶಿಗಳಾಗಿ ಬಿ.ಟಿ.ಚಂದ್ರಶೇಖರ್, ಭಾಗ್ಯ ಬಿ.ವಿ., ಸೋಮು ಚೂರಿ, ವೆಂಕಟರಮಣಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News