ಗೋಂಜ ಬೇಬಿ ಶೆಟ್ಟಿ
Update: 2018-01-26 16:42 GMT
ಬಂಟ್ವಾಳ, ಜ. 26: ಹಿರಿಯ ಕಾಂಗ್ರೆಸ್ ಧುರೀಣ, ಸಾಮಾಜಿಕ ಕಾರ್ಯಕರ್ತ ಚೆನ್ನೈತ್ತೋಡಿ ಗ್ರಾಮದ ಮಾವಿನಕಟ್ಟೆಯ ನಿವಾಸಿ ಗೋಂಜ ಬೇಬಿ ಶೆಟ್ಟಿ ಹೃದಯಾಘಾತದಿಂದ ಶುಕ್ರವಾರ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯನ್ನು ಅಗಲಿದ್ದಾರೆ.
ಗೋಂಜ ಬೇಬಿ ಶೆಟ್ಟಿ ಅವರು ಚೆನ್ನೈತ್ತೋಡಿ ಗ್ರಾಮ ಪಂಚಾಯತ್ನ ಮಾಜಿ ಸದಸ್ಯರಾಗಿದ್ದರು. ಬದ್ಯಾರು ಸತ್ಯನಾರಾಯಣ ಸೇವಾ ಸಮಿತಿಯ ಅಧ್ಯಕ್ಷರಾಗಿ ಪ್ರಸ್ತುತ ಗೌರವಾಧ್ಯಕ್ಷರಾಗಿದ್ದರು.
ಅವರು ತುಳು ಸಂಸ್ಕೃತಿಯ ಆರಾಧನೆಯ ವಿಧಿ ವಿಧಾನಗಳನ್ನು ಹಾಗೂ ಬಂಟ ಸಮುದಾಯದ ಗುರಿಕಾರರಾಗಿ ಕಾರ್ಯಕ್ರಮಗಳ ವಿಧಿ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಮಾಜಕ್ಕೆ ಪರಿಚಯಿಸಿದ್ದರು. ಅವರ ನಿಧನಕ್ಕೆ ಸಚಿವ ಬಿ.ರಮಾನಾಥ ರೈ ಸಹಿತ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.