ನಿರುದ್ಯೋಗ ಸಮಸ್ಯೆ: ಯುವಕ ಆತ್ಮಹತ್ಯೆ

Update: 2018-02-06 18:29 GMT

ಬೆಂಗಳೂರು, ಫೆ.6: ನಿರುದ್ಯೋಗ ಸಮಸ್ಯೆಯಿಂದಾಗಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೂಲತಃ ಆಂಧ್ರಪ್ರದೇಶದ ನವೀನ್‌ಕುಮಾರ್(22) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಇ ವ್ಯಾಸಂಗ ಮಾಡಿದ್ದ ನವೀನ್‌ಕುಮಾರ್, ಇತ್ತೀಚೆಗಷ್ಟೇ ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬಂದು ಚನ್ನಸಂದ್ರದಲ್ಲಿ ಶಿವಣ್ಣ ಎಂಬುವರ ಕಟ್ಟಡದಲ್ಲಿ ಸ್ನೇಹಿತರೊಂದಿಗೆ ಕೊಠಡಿಯಲ್ಲಿ ವಾಸವಾಗಿದ್ದನು. ಉದ್ಯೋಗಕ್ಕಾಗಿ ವಿವಿಧ ಕಡೆ ಪ್ರಯತ್ನಿಸಿದರೂ ಉದ್ಯೋಗ ಸಿಗದ ಕಾರಣ ಮನನೊಂದಿದ್ದ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಕಾಡುಗೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News