ಹನಿಟ್ರಾಪ್ ಧಂದೆ: ಓರ್ವನ ಬಂಧನ

Update: 2018-02-10 17:46 GMT

ಬೆಂಗಳೂರು, ಫೆ.10: ಹಣವಂತರನ್ನು ಫೋನ್ ಮೂಲಕ ಸಂಪರ್ಕಿಸಿ ಮನೆಗೆ ಕರೆಸಿ ನಂತರ ಹನಿಟ್ರಾಪ್ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಅಮೃತಹಳ್ಳಿ ಠಾಣಾ ಪೋಲಿಸರು ಯಶಸ್ವಿಯಾಗಿದ್ದಾರೆ.

ಕನಕ ನಗರ ನಿವಾಸಿ ಮಂಜುನಾಥ್ ಬಂಧಿತ ಆರೋಪಿ. ಪ್ರಕರಣದ ಪ್ರಮುಖ ಆರೋಪಿ ಆಯೀಷಾಳಿಗೆ ಪೋಲಿಸರು ಹುಡುಕಾಟ ನಡೆಸಿದ್ದಾರೆ. ಆಯೀಷಾ, ಮಂಜುನಾಥ್ ಕನಕ ನಗರದ ಮನೆಯೊಂದರಲ್ಲಿ ವಾಸವಿದ್ದರು. ಕಳೆದ ಕೆಲದಿನಗಳ ಹಿಂದೆ ರಾಜೇಂದ್ರಹೆಗಡೆ ಎಂಬುವವರನ್ನು ಮನೆಗೆ ಕರೆಸಿಕೊಂಡು 8ಲಕ್ಷ ರೂ. ವಸೂಲಿ ಮಾಡಿದ್ದರು. ಆರೋಪಿ ಆಯೀಷಾ ಉದ್ಯಮಿಗಳಿಗೆ ಮಿಸ್ ಕಾಲ್ ನೀಡಿ ಪರಿಚಯಿಸಿಕೊಂಡು ಮನೆಗೆ ಕರೆಸಿಕೊಳ್ಳುತ್ತಿದ್ದಳು. ನಂತರ ಇಬ್ಬರು ಸೇರಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರೆಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಅಮೃತಹಳ್ಳಿ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News