ಅಬೂಬಕ್ಕರ್ ಮುಸ್ಲಿಯಾರ್

Update: 2018-02-18 14:12 GMT

ಪುತ್ತೂರು,ಫೆ.18: ಹಲವಾರು ಮಸೀದಿಗಳಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದ ಪುತ್ತೂರು ತಾಲೂಕಿನ ಮುಕ್ರಂಪಾಡಿ ಸಮೀಪದ ಆನಂದಾಶ್ರಮ ಬಳಿಯಲ್ಲಿನ ನಿವಾಸಿ ಅಬೂಬಕ್ಕರ್ ಅಶ್ರಫಿ ಮುಸ್ಲಿಯಾರ್(48) ಅನಾರೋಗ್ಯದಿಂದ ರವಿವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. 

ಸಣ್ಣ ಪ್ರಾಯದಲ್ಲಿಯೇ ಇವರಿಗೆ ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆಗೆ ತುತ್ತಾಗಿದ್ದ ಅಬೂಬಕ್ಕರ್ ಮುಸ್ಲಿಯಾರ್ ಅವರು ಕಿಡ್ನಿ ವೈಫಲ್ಯದಿಂದ ಹಾಗೂ ತನ್ನ ಕಣ್ಣಿನ ಶಕ್ತಿಯನ್ನೂ ಕಳೆದುಕೊಂಡು ಕಳೆದ ಕೆಲವು ವರ್ಷಗಳಿಂದ ಬಳಲುತ್ತಿದ್ದರು. 

ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ. ಮೃತರ ಧಫನ ಕಾರ್ಯ ಭಾನುವಾರ ರಾತ್ರಿ ಸಂಪ್ಯ ಮಸೀದಿ ವಠಾರದಲ್ಲಿ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ