ಬೆಂಗಳೂರು: ಬಿಕ್ಷೆ ಬೇಡುವ ನೆಪದಲ್ಲಿ ಕಳವು; ನಾಲ್ವರ ಬಂಧನ

Update: 2018-02-18 17:11 GMT

ಬೆಂಗಳೂರು, ಫೆ.18: ಬಿಕ್ಷೆ ಬೇಡುವ ನೆಪದಲ್ಲಿ ಬಸ್ ಪ್ರಯಾಣಿಕರ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಹಾಗೂ ಅಂಗಡಿಗಳಲ್ಲಿ ಮಾಲಕರ ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದ ನಾಲ್ವರು ಕಳ್ಳಿಯರನ್ನು ಸುದ್ದುಗುಂಟೆ ಪಾಳ್ಯ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಬಾಗೇಪಲ್ಲಿ ಮೂಲದ ಭಾಗ್ಯ, ಪ್ರಿಯಾ, ಪಾರ್ವತಿ, ಪಲ್ಲವಿ ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ. ನಗರದ ವಿವಿಧ ಬಡಾವಣೆಗಳಲ್ಲಿ ತಂಡ ಕಟ್ಟಿಕೊಂಡು ಬಸ್ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಮೊಬೈಲ್ ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದರು. ನಂತರ ಮಾರಾಟ ಮಾರಾಟ ಮಾಡುತ್ತಿದ್ದರು. ಅಲ್ಲದೆ, ಬಸ್‌ಗಳನ್ನು ಹತ್ತಿ ಕ್ಷಣಾರ್ಧದಲ್ಲಿ ಮೊಬೈಲ್, ಪರ್ಸ್‌ಗಳನ್ನು ಕಳವು ಮಾಡುತ್ತಿದ್ದರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News