ಬೆಂಗಳೂರು: ಲಾರಿ ಢಿಕ್ಕಿ; ಪಾದಾಚಾರಿ ಮೃತ್ಯು
Update: 2018-02-18 17:48 GMT
ಬೆಂಗಳೂರು, ಫೆ.18: ಶರವೇಗದಲ್ಲಿ ಬಂದ ಲಾರಿಯೊಂದು ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಾಚಾರಿಯೊಬ್ಬರು ಮೃತಪಟ್ಟಿರುವ ಘಟನೆ ವೈಟ್ ಪೀಲ್ಡ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಸೀತಾರಾಮ ಪಾಳ್ಯದ ನಿವಾಸಿ ಲಾರಿಚಾಲಕರಾಗಿದ್ದ ಶಂಕರ(48) ಮೃತ ವ್ಯಕ್ತಿ ಎಂದು ಪೋಲಿಸರು ತಿಳಿಸಿದ್ದಾರೆ. ಕೆಲಸದ ನಿಮಿತ್ತ ಹೊಸಕೋಟೆಗೆ ತೆರಳಿದ್ದ ಅವರು ರಾತ್ರಿ 12.10ರ ಸುಮಾರಿಗೆ ಮನೆಗೆ ವಾಪಸಾಗಲು ಓಫಾರಂ ಸಿಗ್ನಲ್ ಬಳಿ ರಸ್ತೆ ದಾಟುತ್ತಿದ್ದಾಗ ಶರವೇಗದಲ್ಲಿ ಬಂದ ಲಾರಿ ಢಿಕ್ಕಿ ಹೊಡೆದಿದೆ.
ನಂತರ ಲಾರಿ ಅವರ ಮೈಮೇಲೆ ಹರಿದ ಪರಿಣಾಮ ಗಂಬೀರವಾಗಿ ಗಾಯಗೊಂಡಿದ್ದ ಅವರನ್ನುಬೌರಿಂಗ್ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.