ಡಿಕೆಎಸ್‌ಸಿ ತಾಯಿಫ್ ಹವಯ್ಯ ಘಟಕದ ಮಹಾಸಭೆ

Update: 2018-02-19 06:49 GMT

ತಾಯಿಫ್, ಫೆ.19: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ಡಿ.ಕೆ.ಎಸ್.ಸಿ.) ಇದರ ಮಕ್ಕ ವಲಯದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ತಾಯಿಫ್ ಹವಯ್ಯ ಯುನಿಟ್‌ನ 6ನೇ ವಾರ್ಷಿಕ ಮಹಾಸಭೆ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮ ಇತ್ತೀಚೆಗೆ ಸಾರಸಿತ್ತೀನ್ ರಫೀಕ್ ಎರ್ಮಾಳ್ ನಿವಾಸದಲ್ಲಿ ನಡೆಯಿತು.

ಎಂ.ಕೆ. ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಂಘಟನೆಯ ಮಾಜಿ ಅಧ್ಯಕ್ಷ ಮೊಯ್ದಿನ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭ ಮುಂದಿನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಪ್ರಕ್ರಿಯೆಯನ್ನು ಡಿಕೆಎಸ್‌ಸಿ ಮಕ್ಕ ವಲಯದ ಮುಖಂಡರಾದ ಇಬ್ರಾಹೀಂ ಕನ್ನಂಗಾರ್, ಅಬೂಬಕರ್ ಕಡಬ, ಉಸ್ಮಾನ್ ತೋಡಾರ್ ನಡೆಸಿಕೊಟ್ಟರು.

ಅಧ್ಯಕ್ಷರಾಗಿ ಮೊಯ್ದಿನ್ ಮುಸ್ಲಿಯಾರ್, ಗೌರವಾಧ್ಯಕ್ಷರಾಗಿ ಎಂ.ಕೆ. ಅಬ್ದುರ್ರಹ್ಮಾನ್ ಮುಸ್ಲಿಯಾರ್, ಪ್ರ.ಕಾರ್ಯದರ್ಶಿಯಾಗಿ ಇಲ್ಯಾಸ್ ಮದನಿ ನಾವೂರು, ಉಪಾಧ್ಯಕ್ಷರಾಗಿ ಇಸ್ಮಾಯೀಲ್ ಮರವೂರು, ಖಾಸಿಂ ಮಲಪ್ಪುರಂ, ಉಮರ್ ಕಣ್ಣೂರು, ಕೇರಳ ಜೊತೆ ಕಾರ್ಯದರ್ಶಿ ಸಿದ್ದೀಕ್ ನಾವೂರು, ಮನ್ಸೂರ್ ಕನ್ಯಾನ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೌಕತ್ ಕಿನ್ಯ, ಮುಸ್ತಫ ಎಡಪ್ಪಳ ಕೇರಳ, ಅನಸ್ ಆಳುವ, ನಿಝಾಂ ಕೊಲ್ಲಂ, ಸಾದಿಕ್ ಅಡ್ಡೂರು, ಸಿದ್ದೀಕ್ ಅಡ್ಡೂರು, ಲತೀಫ್ ಅಡ್ಡೂರು, ಶರಫುದ್ದೀನ್ ಮಲಪ್ಪುರಂ ಆಯ್ಕೆಯಾದರು.

 ರೋಬನ್ ಕಿರಾಅತ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮದನಿ ನಾವೂರು ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News