ಪುಟ್ಟಣ್ಣಯ್ಯ ನಿಧನದಿಂದ ಶೂನ್ಯಭಾವ ಸೃಷ್ಟಿ: ದೇಶಪಾಂಡೆ

Update: 2018-02-19 13:40 GMT

ಬೆಂಗಳೂರು, ಫೆ. 19: ಜನಪ್ರಿಯ ಶಾಸಕರೂ ರೈತ ಮುಖಂಡರೂ ಆಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರ ಹಠಾತ್ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಕಂಬನಿ ಮಿಡಿದಿದ್ದಾರೆ.

ತಮಗೆ ಆತ್ಮೀಯ ಮಿತ್ರರಾಗಿದ್ದ ಪುಟ್ಟಣಯ್ಯನವರ ನಿಧನವು ದುರ್ದೈವದ ಸಂಗತಿ. ರಾಜ್ಯದ ರೈತ ಸಮುದಾಯದ ಧ್ವನಿಯಾಗಿದ್ದ ಅವರು, ಸದನದಲ್ಲಿ ರೈತರ ಬಗ್ಗೆ ಮತ್ತು ಕೃಷಿಕ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಪಾರ ಕಳಕಳಿಯಿಂದ ಮಾತನಾಡುತ್ತಿದ್ದುದು, ಇಡೀ ರಾಜ್ಯವೇ ಹೆಮ್ಮೆ ಪಡುವಂತಹ ವಿಷಯವಾಗಿತ್ತು.

ಅವರ ಅಕಾಲಿಕ ನಿಧನದಿಂದ ಒಂದು ಶೂನ್ಯಭಾವ ಸೃಷ್ಟಿಯಾಗಿದೆ. ಪುಟ್ಟಣಯ್ಯನವರ ಸಾವಿನ ನೋವನ್ನು ಭರಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲಿ ಎಂದು ದೇಶಪಾಂಡೆ ಪ್ರಾರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News