ಪಿ.ಎಸ್. ಉಪಾಧ್ಯಾಯ

Update: 2018-02-27 16:36 GMT

ಮಂಗಳೂರು, ಫೆ. 27: ನಗರದ ಮಣ್ಣಗುಡ್ಡೆಯ ಹೊಟೇಲ್ ದುರ್ಗಾಮಹಲ್‌ನ ಮಾಲಕ ಪಿ.ಎಸ್.ಉಪಾಧ್ಯಾಯ (89) ಅವರು ಗುರುವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮಣ್ಣಗುಡ್ಡೆ ಶ್ರೀಕೃಷ್ಣ ಗಾನಸುಧಾ ಸಂಗೀತ ವಿದ್ಯಾಲಯದ ಸಂಸ್ಥಾಪಕರು, ಜನತ ಸೇವಾ ಟ್ರಸ್ಟ್, ಗೋಕುಲ ಮತ್ತು ಕೃಷ್ಣ ಮಂದಿರದ ಸ್ಥಾಪಕ ಅಧ್ಯಕ್ಷರಾಗಿ, ಮಣ್ಣಗುಡ್ಡ ಗುರ್ಜಿ ಸಮಿತಿಯ ಪದಾಧಿಕಾರಿಯಾಗಿ ಅವರು ಕಾರ್ಯನಿರ್ವಹಿಸಿದ್ದರು. ಹೊಟೇಲ್ ಮಾಲಕರ ಅಸೋಸಿಯೇಶನ್‌ನ ಪದಾಧಿಕಾರಿಯಾಗಿ ರಾಜ್ಯಮಟ್ಟದ ಹೊಟೇಲ್ ಮಾಲಕರ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಧಾರ್ಮಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆಗೈದಿದ್ದ ಉಪಾಧ್ಯಾಯರು ಬ್ರಾಹ್ಮಣ ಸಮಾಜದ ಮುಖಂಡರಾಗಿದ್ದರು.

ಸಂತಾಪ: ಶರವು ರಾಘವೇಂದ್ರ ಶಾಸ್ತ್ರೀ , ಪ್ರದೀಪ ಕುಮಾರ ಕಲ್ಕೂರ, ಸುಧಾಕರ ರಾವ್ ಪೇಜಾವರ ಮೊದಲಾದವರು ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ