ಉದ್ಯಮಿ ಗುರುಪುರ ಸದಾನಂದ ಪ್ರಭು
Update: 2018-03-04 16:57 GMT
ಮಂಗಳೂರು, ಮಾ.4: ಗೇರು ಬೀಜ ಉದ್ಯಮದಲ್ಲಿ ನಿರತರಾಗಿದ್ದ, ಅಚಲ್ ಇಂಡಸ್ಟ್ರೀಸ್ನ ಸ್ಥಾಪಕ ಹಾಗೂ ಮಾಲಕ ಗುರುಪುರ ಸದಾನಂದ ಪ್ರಭು (93) ರವಿವಾರ ಮುಂಜಾನೆ 4:30ಕ್ಕೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕೆನರಾ ಚೇಂಬರ್ ಆಪ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸದಾನಂದ ಪ್ರಭು ಮಂಗಳೂರು ಕ್ಯಾಶ್ಯೂ ಮ್ಯಾನುಫೆಕ್ಟರರ್ಸ್ ಎಸೋಸಿಯೇಶನ್ನಲ್ಲೂ ಸಕ್ರಿಯರಾಗಿದ್ದರು. ರೋಟರಿ ಕ್ಲಬ್ನಲ್ಲೂ ತೊಡಗಿಸಿಕೊಂಡು ಸಮಾಜ ಸೇವೆಗೈದು ಗಮನ ಸೆಳೆದಿದ್ದರು.