ಸಿದ್ದರಾಮಯ್ಯರನ್ನು ಲಾಡ್ಜ್ ಬಾಯ್ ಗೆ ಹೋಲಿಸಿದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೇಳಿದ್ದೇನು?

Update: 2018-03-08 12:25 GMT

ಬೆಂಗಳೂರು,ಮಾ.8: ಶಶಿಕಲಾ ನಟರಾಜನ್ ಗೆ ಜೈಲಿನಲ್ಲಿ ಸೌಲಭ್ಯಕ್ಕೆ ಸಿಎಂ ಸೂಚಿಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಸುರೇಶ್ ಕುಮಾರ್, ಸಿದ್ದರಾಮಯ್ಯರವರನ್ನು ಲಾಡ್ಜ್ ಬಾಯ್ ಗೆ ಹೋಲಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು 'ನಾವು ಬೇರೆ ಊರಲ್ಲಿ ಉಳಿದುಕೊಂಡಾಗ ಹಾಸಿಗೆ, ತಲೆದಿಂಬು ಬೇಕಾದ್ರೆ ಲಾಡ್ಜ್ ಬಾಯ್ ಗೆ ಹೇಳುತ್ತೇವೆ. ಆದರೆ ಹಾಸಿಗೆ, ತಲೆದಿಂಬು ಬೇಕಾದರೆ ಕೆಲವರು ಸಿಎಂಗೆ ಹೇಳುತ್ತಾರೆ ಎಂದಿದ್ದಾರೆ. 

ಸುರೇಶ್ ಕುಮಾರ್ ರ ಈ ಟ್ವೀಟ್ ಗೆ ಪರ- ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News