ಸರಳ ಜೀವನಕ್ಕೆ ನೈಸರ್ಗಿಕ ತತ್ವ ಪಾಲಿಸಿ: ಡಾ.ಚಂದ್ರಶೇಖರ ಗುರೂಜಿ
Update: 2018-03-12 23:51 IST
ಬೆಂಗಳೂರು, ಮಾ.12: ಇಂದಿನ ವೇಗದ ಜಗತ್ತಿನಲ್ಲಿ ಬಹುತೇಕ ಜನರು ತಮ್ಮ ವೈಯಕ್ತಿಕ ಬೆಳವಣಿಗೆಗೆ ಮಾತ್ರ ಆಸಕ್ತಿ ತೋರುತ್ತಿದ್ದು, ನೈಸರ್ಗಿಕ ತತ್ವಗಳನ್ನು ಮರೆಯುತ್ತಿದ್ದಾರೆ ಎಂದು ಸರಳ ಪರಿವಾರದ ಡಾ.ಚಂದ್ರಶೇಖರ್ ಗುರೂಜಿ ವಿಷಾದಿಸಿದರು.
ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ‘ಸರಳ ಪರಿವಾರ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆನಂದ ಎನ್ನುವುದು ನಮ್ಮಲ್ಲಿಯೇ ಇರುತ್ತದೆ. ಇದಕ್ಕಾಗಿ ನಾವು ಹೊರಗಡೆ ಹುಡುಕಬೇಕಾದ ಅಗತ್ಯವಿಲ್ಲ. ಆದರೆ, ನಾವು ಆನಂದವಾಗಿರಬೇಕಾದರೆ ನಮ್ಮಲ್ಲಿ ಸತ್ಯವನ್ನು ಪರಿಪಾಲನೆ ಮಾಡಬೇಕು ಎಂದರು.