ಶಾಸಕ ಅಭಯ್ ಚಂದ್ರಜೈನ್ ಕ್ಷಮೆಯಾಚನೆಗೆ ಆಗ್ರಹ

Update: 2018-03-19 16:06 GMT

ಬೆಂಗಳೂರು, ಮಾ.19: ಕರಿಂಜೆ ಮಠಾಧೀಶರಾದ ಮುಕ್ತಾನಂದ ಸ್ವಾಮೀಜಿ ವಿರುದ್ಧ ಸುಳ್ಳು ಆರೋಪ ಮಾಡಿರುವ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಅಭಯ್ ಚಂದ್ರಜೈನ್ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ರಾಜ್ಯ ಮಡಿವಾಳ ಸಂಘ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ರಂಗಸ್ವಾಮಿ, ಸ್ವಾಮೀಜಿ ಪ್ರವಚನ ಮಾಡುವ ಸಂದರ್ಭದಲ್ಲಿ ಪುರಾಣ ಕಾಳದ ರಾಮ ಮತ್ತು ರಾವಣ ಬಗ್ಗೆ, ಕೃಷ್ಣ ಮತ್ತು ಕಂಸರ ಕುರಿತು ವಿವರಣೆ ನೀಡಿದ್ದಾರೆಯೇ ಹೊರತು ಯಾರನ್ನು ನಿಂದಿಸುವ ಕಾರ್ಯ ಮಾಡಿಲ್ಲ. ಈ ಬಗ್ಗೆ ಸುಳ್ಳು ಆರೋಪ ಮಾಡಿರುವುದನ್ನು ಖಂಡಿಸುತ್ತೇವೆ. ಈ ವಿಷಯವನ್ನು ಕುರಿತು ಶಾಸಕ ಅಭಯ್ ಚಂದ್ರ ಜೈನ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News