ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಕ್ಕಾ ವಲಯ: ವಾರ್ಷಿಕ ಮಹಾಸಭೆ

Update: 2018-03-24 12:07 GMT

ತಾಯಿಫ್, ಮಾ. 24: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಕ್ಕಾ ವಲಯದ ತಾಯಿಫ್ ಯುನಿಟ್ ಇದರ ವಾರ್ಷಿಕ ಮಹಾಸಭೆಯು ತಾಯಿಫ್ ನ ದಾರುಲ್ ಬಹ್ಲಾ ಆಡಿಟೋರಿಯಂನಲ್ಲಿ ಸುನ್ನಿ ಸೆಂಟರ್ ಅಧ್ಯಕ್ಷ ಕೆ.ಎಸ್. ಆಟ್ಟಕೋಯ ತಂಙಳ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.

ಜಿದ್ದಾ ಯುನಿಟ್ ಅಧ್ಯಕ್ಷ ಝಕರಿಯಾ ತಂಙಳ್ ರ ಕಿರಾಅತ್ ಪಠಿಸಿದರು. ಸಂಸ್ಥೆಯ ಮ್ಯಾನೇಜರ್ ಮುಸ್ತಫಾ ಸಹದಿ ಉದ್ಘಾಟಿಸಿ, ನಂತರ ಮಾತನಾಡಿದರು.

ತಾಯಿಫ್ ಯುನಿಟ್ ಮತ್ತು ಯುತ್ ವಿಂಗ್ ನ ವಾರ್ಷಿಕ ವರದಿಯನ್ನು ತಾಯಿಫ್ ಯುನಿಟ್ ಕಾರ್ಯದರ್ಶಿ ಅಬೂಬಕರ್ ಕಡಬ ವಿವರಿಸಿದರು. ನಂತರ ಮಕ್ಕಾ ವಲಯ ಕಾರ್ಯದರ್ಶಿ  ಇಸ್ಮಾಯಿಲ್ ಮೂಡಿಗೆರೆ ನೇತೃತ್ವದಲ್ಲಿ ನೂತನ ಕಮಿಟಿ ರಚಿಸಲಾಯಿತು.

ಅಧ್ಯಕ್ಷರಾಗಿ ಇಮ್ತಿಯಾಝ್ ಅಹ್ಮದ್ ಕುಂದಾಪುರ, ಗೌರವಾಧ್ಯಕ್ಷರಾಗಿ ಅಲ್ತಾಫ್ ಬಜ್ಪೆ, ಉಪಾಧ್ಯಕ್ಷರುಗಳಾಗಿ ಮಹಮ್ಮದ್ ಹನೀಫ್ ಕುತ್ತಾರ್, ಮುಹಮ್ಮದ್ ಝುಹ್ರಿ ಮಾಚಾರ್, ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ವಿಟ್ಲ, ಜೋತೆ ಕಾರ್ಯದರ್ಶಿಯಾಗಿ ಮಾಲಿಕ್ ಇಡ್ಯ, ಅಝರ್ ಉಳ್ಳಾಲ, ಖಜಾಂಜಿಯಾಗಿ ಟಿ.ಎಚ್. ಉಸ್ಮಾನ್ ತಾಳಿಪ್ಪಾಡಿ, ಸಂಚಾಲಕರಾಗಿ ಅರಬಿ ಕುಂಞಿ ಬೀರಿ, ರಿಯಾಝ್ ಉಳ್ಳಾಲ, ಫವಾಝ್ ಬಾಯಾರ್, ಸಲೀಂ ಪಲ್ಲಕೋಡು, ಹಂಝ ಮಡಿಕೇರಿ ಹಾಗು ಸದಸ್ಯರುಗಳಾಗಿ ಯೂನುಸ್ ಜೆಪ್ಪು, ಇಬ್ರಾಹಿಮ್ ಕನ್ನಂಗಾರ್, ಹಮೀದ್ ಕರೋಪಾಡಿ, ನವಾಝ್ ಉಪ್ಪಿನಂಗಡಿ, ಹನಿಫೀ ಇಮಾಮಿ, ಅಶ್ರಫ್ ಸುಳ್ಯ, ಇಕ್ಬಾಲ್ ಮದನಿ, ಇಮಾದ್ ಕುಂದಾಪುರ, ಸತ್ತಾರ್ ಪುತ್ತೂರು, ಅಫೀಝ್ ಅಡ್ಡೂರು, ರಫೀಕ್ ವಿಟ್ಲ, ಹಮೀದ್ ಕನ್ನಂಗಾರ್, ಶಾಕಿರ್, ರಹೀಮ್ ಕೋಡುಂಗೈ ಆಯ್ಕೆಯಾದರು.

ತಾಯಿಫ್ ಯುತ್ ವಿಂಗ್ ಅಧ್ಯಕ್ಷರಾಗಿ ಇಕ್ಬಾಲ್ ಮದನಿ, ಕಾರ್ಯದರ್ಶಿಯಾಗಿ ಇಮಾದ್ ಕುಂದಾಪುರ, ಖಜಾಂಜಿಯಾಗಿ ರಫೀಕ್ ವಿಟ್ಲ ಅವರನ್ನು ಆರಿಸಲಾಯಿತು.

ಸುನ್ನಿ ಸೆಂಟರ್ ಅಧ್ಯಕ್ಷ ಆಟ್ಟಕೋಯ ತಂಙಳ್ ರನ್ನು ಮಕ್ಕಾ ವಲಯ ಪರವಾಗಿ ಮಕ್ಕಾ ವಲಯ ಅಧ್ಯಕ್ಷ ಮತ್ತು ಸದಸ್ಯರು, ಹವಯ್ಯ ಯುನಿಟ್ ಸದಸ್ಯರು  ಶಾಲು ಹೊದಿಸಿ ಸನ್ಮಾನಿಸಿದರು. ಸುನ್ನಿಸೆಂಟರ್ ಮ್ಯಾನೇಜರ್ ಮುಸ್ತಫಾ ಸಅದಿ ಮತ್ತು ಪೂಕೋಯ ತಂಙಳ್ ರನ್ನು ಮಕ್ಕಾ ವಲಯ ಮತ್ತು ತಾಯಿಫ್ ಯುನಿಟ್ ಮತ್ತು ಯುತ್ ವಿಂಗ್ ವತಿಯಿಂದ ಸನ್ಮಾನಿಸಲಾಯಿತು.

ಸಭೆಯಲ್ಲಿ ಮಕ್ಕಾ ವಲಯ ಅಧ್ಯಕ್ಷ ಶರೀಫ್ ಮರವೂರು, ಕಾರ್ಯದರ್ಶಿ ಇಸ್ಮಾಯಿಲ್ ರದ್ವ, ಪೂಕೋಯ ತಂಙಳ್ ಕುಂಬೋಳ್, ಮದೀನ ಯುನಿಟ್ ಅಧ್ಯಕ್ಷ ಮಹಮ್ಮದ್ ಅಲಿ ಪಾಣೆಮಂಗಳೂರು, ಬಶೀರ್ ಮದೀನ ಯುನಿಟ್, ಮಕ್ಕಾ ವಲಯ ರಿಶೀವರ್ ಮಹಮ್ಮದ್ ಮುಸ್ಲಿಯಾರ್ ಉದ್ದಬೆಟ್ಟು, ಜಿದ್ದಾ ಯುನಿಟ್ ಅಧ್ಯಕ್ಷ ಝುಕರಿಯ ತಂಙಳ್, ಕಾರ್ಯದರ್ಶಿ ಅಮಾನುಲ್ಲ ವಾಮಂಜೂರು, ಹೈದರ್ ಜೊಗಿಬೆಟ್ಟು, ಮಕ್ಕಾ ಯುನಿಟ್ ನ ಮೂಸಾ ಹಾಜಿ ಕಿನ್ಯ, ಮಕ್ಕಾ ಯುನಿಟ್ ಮಾಜಿ ಅಧ್ಯಕ್ಷ ಇಬ್ರಾಹೀಂ ಕನ್ನಂಗಾರ್, ಹವಯ್ಯ ಯುನಿಟ್ ನ ಎಂ.ಕೆ. ಅಬ್ದುಲ್ ರಹ್ಮಾನ್ ತೋಡಾರು, ಇಸ್ಮಾಯಿಲ್ ತೋಡಾರು, ಕಾರ್ಯದರ್ಶಿ ಇಲ್ಯಾಸ್ ಮದನಿ ನಾವೂರು, ತಾಯಿಫ್ ಯುನಿಟ್ ನ ಅಧ್ಯಕ್ಷ ಇಮ್ತಿಯಾಝ್ ಅಹ್ಮದ್ ಕುಂದಾಪುರ, ಮುಹಮ್ಮದ್ ಝುಹ್ರಿ ಮಾಚಾರ್, ಹನೀಫೀ ಇಮಾಮಿ, ಇಕ್ಬಾಲ್ ಮದನಿ, ಅರಬಿ ಕುಂಞಿ, ಉಸ್ಮಾನ್ ತಾಳಿಪ್ಪಾಡಿ, ಹಮೀದ್ ಕರೋಪಾಡಿ, ಅಬ್ದುಲ್ ರಝಾಕ್ ವಿಟ್ಲ, ಮಾಲಿಕ್ ಇಡ್ಯ, ಇಮಾದ್ ಕುಂದಾಪುರ, ಹಮೀದ್ ಕನ್ನಂಗಾರ್, ಶಾಕಿರ್, ರಹೀಮ್ ಕೋಡುಂಗೈ, ಅಫೀಝ್ ಅಡ್ಡೂರು, ನವಾಝ್ ಉಪ್ಪಿನಂಗಡಿ, ಅಶ್ರಫ್ ಸುಳ್ಯ, ರಫೀಕ್ ವಿಟ್ಲ, ಯೂನುಸ್ ಜೆಪ್ಪು, ಯುತ್ ವಿಂಗ್ ಶಹರ್ ಅಧ್ಯಕ್ಷ ಅಶ್ರಫ್ ಸೂರಿಂಜೆ ಹಾಗು ಇತರ ಯುನಿಟ್ ಮತ್ತು ಯುತ್ ವಿಂಗ್ ಸದಸ್ಯರು ಭಾಗವಹಿಸಿದ್ದರು.

ಇಬ್ರಾಹಿಮ್ ಕನ್ನಂಗಾರ್ ಕಾರ್ಯಕ್ರಮ ನಿರೂಪಿಸಿ, ಅಬೂಬಕರ್ ಕಡಬ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News