ಕ್ರಿಕೆಟ್ ಆಸ್ಟ್ರೇಲಿಯ ಸರಿಯಾದ ನಿರ್ಧಾರ ತೆಗೆದುಕೊಂಡಿದೆ: ಸಚಿನ್ ತೆಂಡುಲ್ಕರ್

Update: 2018-03-28 18:54 GMT

ಹೊಸದಿಲ್ಲಿ,ಮಾ.28: ರಾಷ್ಟ್ರೀಯ ನಾಯಕ ಸ್ಟೀವನ್ ಸ್ಮಿತ್ ಹಾಗೂ ಉಪ ನಾಯಕ ಡೇವಿಡ್ ವಾರ್ನರ್‌ರನ್ನು 1 ವರ್ಷ ನಿಷೇಧಿಸಿರುವ ಕ್ರಿಕೆಟ್ ಆಸ್ಟ್ರೇಲಿಯ ಸೂಕ್ತ ನಿರ್ಧಾರ ತೆಗೆದುಕೊಂಡಿದೆ ಎಂದು ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.

‘‘ಕ್ರಿಕೆಟ್ ಜಂಟಲ್‌ಮ್ಯಾನ್ ಪಂದ್ಯವೆಂದೇ ಖ್ಯಾತಿ ಪಡೆದಿದೆ. ಈ ಪಂದ್ಯವನ್ನು ಪ್ರಾಮಾಣಿಕವಾಗಿ ಆಡಬೇಕು. ಏನು ನಡೆದಿದೆಯೋ ಅದು ದುರದೃಷ್ಟಕರ. ಪಂದ್ಯದ ಸಮಗ್ರತೆ ಎತ್ತಿಹಿಡಿಯಲು ಸರಿಯಾದ ಕ್ರಮಕೈಗೊಳ್ಳಲಾಗಿದೆ. ಗೆಲುವು ಅತ್ಯಂತ ಮುಖ್ಯ. ಆದರೆ, ಯಾವ ರೀತಿ ಗೆಲ್ಲುತ್ತೀರಿ ಎನ್ನುವುದು ಮತ್ತಷ್ಟು ಮುಖ್ಯವಾಗುತ್ತದೆ’’ ಎಂದು ತೆಂಡುಲ್ಕರ್ ಟ್ವಿಟರ್ ಪೇಜ್‌ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News